ಮೈಸೂರು ವರದಿ: ಸಂಘಟನೆಯಲ್ಲಿ ಆದ ಕೆಲವು ತಾಂತ್ರಿಕ ಅವ್ಯವಸ್ಥೆಗಳಿಂದಾಗಿ ಎರಡು ದಿನ ನಡೆಯಬೇಕಿದ್ದ ಸೈಕಲ್ ರೇಸ್ ಒಂದೇ ದಿನಕ್ಕೆ ಮುಗಿಯಿತು.
`ಸೈಕ್ಲಿಸ್ಟ್ಗಳನ್ನು ಹಿಂಬಾಲಿಸುವ ಪೈಲೆಟ್ಗಳ (ಬೈಕ್ ಸವಾರರು) ಕೊರತೆಯಿಂದಾಗಿ ಸೈಕ್ಲಿಂಗ್ ಅನ್ನು ಮೊಟಕುಗೊಳಿಸಲಾಯಿತು. ಪೂರ್ವನಿರ್ಧಾರದಂತೆ ಶನಿವಾರ ಮೈಸೂರಿನಿಂದ ಮಡಿಕೇರಿಗೆ ಹೋಗಿ ರಾತ್ರಿ ವಿಶ್ರಾಂತಿ ಪಡೆದು, ಭಾನುವಾರ ಬೆಳಿಗ್ಗೆ ಮರಳಿ ಮೈಸೂರಿಗೆ ಬರಬೇಕಿತ್ತು.
ಆದರೆ ಪುರುಷರಿಗೆ ಕುಶಾಲನಗರದವರೆಗೆ ಮತ್ತು ಮಹಿಳೆಯರಿಗೆ ಪಿರಿಯಾಪಟ್ಟಣದವರೆಗೆ ಮಾತ್ರ ಸ್ಪರ್ಧೆ ನಡೆಸಲಾಯಿತು~ ಸ್ಪರ್ಧೆಯ ನಿರ್ಣಾಯಕರಾಗಿದ್ದ ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯ ಮೂಲಗಳು ತಿಳಿಸಿವೆ.
`ಹವಾಮಾನ ವೈಪರಿತ್ಯದ ಕಾರಣದಿಂದ ಸ್ಪರ್ಧೆಯ ಅಂತರವನ್ನು ಮೊಟಕುಗೊಳಿಸಲಾಗಿದೆ~ ಎಂದು ಮೈಸೂರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ. ಸುರೇಶ್ ತಿಳಿಸಿದ್ದಾರೆ.
ಫಲಿತಾಂಶ: ಪುರುಷರು (100 ಕಿ.ಮೀ): ಅಡಿವೆಪ್ಪ ಅವಟಿ (ಬಾಗಲಕೋಟೆ)-1, ಶ್ರೀಶೈಲ ಲಾಯಣ್ಣವರ (ಗದಗ)-2, ರಾಮಪ್ಪ ಅಂಬಿ (ವಿಜಾಪುರ)-3, ಸಿದ್ದಪ್ಪ ಕುರಣಿ -4, ರಮೇಶ್ ರಾಥೋಡ್ -5 (ವಿಜಾಪುರದವರು), ಸಂತೋಷ್ ಮಾನೆ (ಬಾಗಲಕೋಟೆ)-6, ಶಿವರಾಜ ಮಲ್ಲಿಗವಾಡ(ಗದಗ)-7, ವಿಠಲ್ ಹಳಬರ (ವಿಜಾಪುರ)-8. ವಿರೂಪಾಕ್ಷ ನಾಗನೂರ್ (ಬೆಳಗಾವಿ)-9, ಸಚಿನ್ ಕುರಿಯಾರ್ (ಬೆಳಗಾವಿ)-10.
ಮಹಿಳೆಯರು: ಶೈಲಾ ಮಟ್ಯಾಳ -1, ರಾಜೇಶ್ವರಿ ಡುಳ್ಳಿ-2 (ಬೆಳಗಾವಿಯವರು), ಫರಿಯಾಲ್ ಜಮಾದಾರ್ (ವಿಜಾಪುರ)-3, ಸೌಮ್ಯ ಅರಸ್ (ಮೈಸೂರು)-4, ದಾನಮ್ಮ ಬೆಚಕಂಡಿ -5, ಭಾಗ್ಯ ಮಸೂತಿ-6, ಕಾವೇರಿ ಮೊರನಾಳ -7, ದಾನಮ್ಮ ಗುರವ-8, ಮೀರಾ ಮೇಲನಕರ್- 9, ಸರೋಜ್ ಚೌಹಾಣ್ -10.