ಈ ನಿಟ್ಟಿನಲ್ಲಿ `ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಗಳ ಹಿತರಕ್ಷಣೆ ಸಾಧ್ಯವೇ?' ಎಂಬ ಚಿಂತನ ಮಂಥನ ಕಾರ್ಯಕ್ರಮವನ್ನು ಶನಿವಾರ (ಏ.13) ಕರ್ನಾಟಕ ಸಾಹಿತ್ಯ ಪರಿಷತ್ತು ಆಯೋಜಿಸಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಾಗಿ ಸಂಸದ ಜಯಪ್ರಕಾಶ್ ಹೆಗ್ಡೆ, ವಿಧಾನಸಭಾ ಸದಸ್ಯ ಎಸ್.ಆರ್. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಕೇಂದ್ರ ಮಾಜಿ ಸಚಿವ ಧನಂಜಯ ಕುಮಾರ್ ಮತ್ತು ಚಿಂತಕ ರವೀಂದ್ರ ರೇಷ್ಮೆ ಈ ಚಿಂತನ ಮಂಥನದಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸುವರು. ಡಾ. ಸಿ. ವೀರಣ್ಣ ಅಧ್ಯಕ್ಷತೆ ವಹಿಸುವರು.
ಸ್ಥಳ: ಪಂಪ ಸಭಾಂಗಣ, 83/ಇ, 15 ನೇ ಮುಖ್ಯ ರಸ್ತೆ, ವಿಜಯನಗರ (ವಿಜಯನಗರ ಕ್ಲಬ್ ಎದುರಿಗಿರುವ ರಸ್ತೆ). ಸಂಜೆ 5