ನವದೆಹಲಿ: ರಾಜ್ಯ ವಿಧಾನ ಮಂಡಲದ ಅಂದಾಜು ಸಮಿತಿ ಸದಸ್ಯರು ಪ್ರಯಾಣಿಸುತ್ತಿದ್ದ ವಿಮಾನವೊಂದಕ್ಕೆ ಹಕ್ಕಿ ಬಡಿದು ಸ್ವಲ್ಪದರಲ್ಲಿ ದುರಂತದಿಂದ ಪಾರಾದ ಘಟನೆ ಗುರುವಾರ ಬೆಳಿಗ್ಗೆ ಅಮೃತಸರ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಅಂದಾಜು ಸಮಿತಿ ಸದಸ್ಯರಾದ ವಿಜಯ ಕುಮಾರ್, ನಾಗೇಶ್, ಅಮರೇಗೌಡ, ದೊಡ್ಡನಗೌಡ ಪಾಟೀಲ್, ಎಚ್. ಎಸ್.ಮಹದೇವ ಪ್ರಸಾದ್ ಅಧಿಕೃತ ಕಾರ್ಯಕ್ರಮದ ಮೇಲೆ ಅಮೃತಸರಕ್ಕೆ ಹೋಗಿದ್ದರು. ಬೆಳಿಗ್ಗೆ 9.40ಕ್ಕೆ ಖಾಸಗಿ ಅಮೃತಸರದಿಂದ ದೆಹಲಿ ಹೊರಟಾಗ ಈ ಘಟನೆ ನಡೆಯಿತು.
ವಿಮಾನ ರನ್ವೇಯಲ್ಲಿ ವೇಗವಾಗಿ ಹೊರಟಿದ್ದಾಗ ಹಕ್ಕಿ ಬಡಿಯಿತು. ತಕ್ಷಣ ಜಾಗೃತರಾದ ಚಾಲಕ ವಿಮಾನವನ್ನು ಮೇಲಕ್ಕೆ ಹಾರಿಸದೆ ವೇಗ ಕಡಿಮೆ ಮಾಡಿ ನಿಲ್ದಾಣಕ್ಕೆ ವಾಪಸ್ ತಂದರು. ಅಂದಾಜು ಸಮಿತಿ ಸದಸ್ಯರು ಮತ್ತೊಂದು ವಿಮಾನದಲ್ಲಿ ಮಧ್ಯಾಹ್ನ 3.30ಕ್ಕೆ ದೆಹಲಿಗೆ ಧಾವಿಸಿದರು.