ಬೆಂಗಳೂರು: ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಕೆಲವೆಡೆ ಮತ್ತು ಕರಾವಳಿಯ ಹಲವೆಡೆ ಮಳೆಯಾಗಿದೆ.
ಶಿಕಾರಿಪುರದಲ್ಲಿ ಅತಿ ಹೆಚ್ಚು 8 ಸೆಂ.ಮೀ ಮಳೆಯಾಗಿದ್ದು, ಉಡುಪಿ, ಅರಸಾಳು 4 ಸೆಂ.ಮೀ, ತ್ಯಾಗರ್ತಿ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ 3, ಮುಲ್ಕಿ, ಹಾನಗಲ್, ಗುತ್ತಲ, ಮುನಿರಾಬಾದ್, ಹೊಸನಗರ, ಹುಂಚದಕಟ್ಟೆ, ಹೊಳಲೂರು, ಭದ್ರಾವತಿ, ಜಯಪುರ, ಕಮ್ಮರಡಿ, ಬಾಳೆಹೊನ್ನೂರು, ಬೆಲೂರು, ಮಲೆಮಹಾದೇಶ್ವರ ಬೆಟ್ಟ, ಹೊಸಪೇಟೆ, ಹಡಗಲಿ, ಹೊನ್ನಾಳಿ, ಚನ್ನಗಿರಿ 2 ಸೆಂ.ಮೀ ಮಳೆಯಾಗಿದೆ.
ಬೀದರ್ನಲ್ಲಿ ಅತಿ ಹೆಚ್ಚು ಉಷ್ಣಾಂಶ 31.2 ಡಿಗ್ರಿ ಸೆಲ್ಸಿಯಸ್ ಮತ್ತು ದಾವಣಗೆರೆಯಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ಕರಾವಳಿಯ ಹಲವೆಡೆ ಹಾಗೂ ಒಳನಾಡಿನ ಕೆಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.