ನಂಜನಗೂಡು: ದಾವಣಗೆರೆಯ ಸತ್ಯನಾರಾಯಣ್ ಭಾನುವಾರ ರಾತ್ರಿ ನಂಜನಗೂಡು ಸ್ಪೋರ್ಟ್ಸ್ ಫೌಂಡೇಷನ್ ಹಾಗೂ ಭಾರತೀಯ ಮಾನವ ಹಕ್ಕು ಫೆಡರೇಷನ್ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ `ವಜ್ರದೇಹಿ-2012~ ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
75 ಕೆ.ಜಿ ಮೇಲ್ಪಟ್ಟವರ ವಿಭಾಗದಲ್ಲಿ ಮೊದಲಿಗರಾಗಿದ್ದ ಸತ್ಯನಾರಾಯಣ್ ವಜ್ರದೇಹಿ ಕೀರ್ತಿಗೆ ಪಾತ್ರರಾದರು.
ಫಲಿತಾಂಶ: 55 ಕೆ.ಜಿ. ವಿಭಾಗ: ತೌಸಿಫ್ (ಬೆಳಗಾವಿ)-1, ಮೊಹಮ್ಮದ್ ರಫೀಕ್ (ಧಾರವಾಡ)- 2, ಅಭಿಲಾಶ್ (ನಂಜನಗೂಡು)-3, 60 ಕೆ.ಜಿ: ಉಮೇಶ್ ಗಂಗಾವಿ, (ಬೆಳಗಾವಿ)-1, ಕೆ.ಎಂ.ಸಂದೇಶ್ (ಮೈಸೂರು)-2, ಫಿರೋಜ್ (ದಾವಣಗೆರೆ)-3; 65 ಕೆ.ಜಿ: ಕೆ.ಆರ್.ರಮೇಶ್ (ಮಂಗಳೂರು)-1, ತಿಲಾನಿ (ದಾವಣಗೆರೆ)-2, ಸ್ಟ್ಯಾನಿ ಅಂತೋನಿ (ಬೆಂಗಳೂರು)- 3; 70 ಕೆ.ಜಿ: ಪ್ರತಾಪ್ ಕಲ್ಕುಂಡ್ಕರ್ (ಬೆಳಗಾವಿ)-1, ಪ್ರಕಾಶ್ ಪೂಜಾರಿ (ಮಂಗಳೂರು)-2, ಸಂತೋಷ್ ವಾಡೇಕರ್ ( ಧಾರವಾಡ)-3; 75 ಕೆ.ಜಿ.: ಕಿಶೋರ್ ಚೌಗುಲೆ (ಬೆಳಗಾವಿ)- 1, ಲಿತೇಶ್ (ಮಂಗಳೂರು)-2, ಅರುಣ್ (ಉಡುಪಿ)-3.
75 ಕೆ.ಜಿ.ಮೇಲ್ಪಟ್ಟವರು: ಸತ್ಯನಾರಾಯಣ್ (ದಾವಣಗೆರೆ)-1. ಮನೋಜ್ಕುಮಾರ್ (ಬೆಂಗಳೂರು)-2, ಹೇಮಂತಕುಮಾರ್ (ಮೈಸೂರು)- 3.