ನರಗುಂದ: ತಾಲ್ಲೂಕಿನ ಶಿರೋಳದಲ್ಲಿ ಯಚ್ಚರೇಶ್ವರ ರಥೋತ್ಸವದ ಅಂಗವಾಗಿ ಗ್ರಾಮದ ನಕ್ಷತ್ರ ಗೆಳೆಯರ ಬಳಗದ ಆಶ್ರಯದಲ್ಲಿ ಇದೇ 23ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮರಡಿ ಮಾರುತಿ ದೇವಸ್ಥಾನದ ಆವರಣದಲ್ಲಿ ರಾಜ್ಯಮಟ್ಟದ ಮುಕ್ತ ವಾಲಿಬಾಲ್ ಟೂರ್ನಿ ನಡೆಯಲಿದೆ.
ವಿಜೇತರಿಗೆ ಪ್ರಥಮ ಬಹುಮಾನ ರೂ.3333, ದ್ವಿತೀಯ ರೂ. 2222 ಹಾಗೂ ತೃತೀಯ ಬಹುಮಾನವಾಗಿ 1111 ಹಾಗೂ ಶೀಲ್ಡುಗಳನ್ನು ನೀಡ ಲಾಗುವುದು. ಆಸಕ್ತ ತಂಡಗಳು ರೂ. 201ಗಳೊಂದಿಗೆ ವಿಠ್ಠಲ ಮೊ. 9538628313, ವಿನಯ. ಮೊ. 8105390258, ಬಸು ಮೊ. 9538259233ರವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಟೂರ್ನಿ ಸಾನ್ನಿಧ್ಯವನ್ನು ಗದಗನ ಡಾ.ತೋಂಟದ ಸಿದ್ದಲಿಂಗ ಸ್ವಾಮೀಜಿ, ಸಮ್ಮುಖವನ್ನು ಗುರುಬಸವ ಸ್ವಾಮೀಜಿ, ಅಧ್ಯಕ್ಷತೆಯನ್ನು ಪಿ.ಎಲ್. ತಿರಕನಗೌಡ್ರ ವಹಿಸುವರು.
ಮುಖ್ಯ ಅತಿಥಿಗಳಾಗಿ ಎಂ.ಎಫ್. ಆಡಿನ, ಎನ್.ಬಿ.ಗಾಡಿ ಸೇರಿದಂತೆ ಮೊದಲಾದವರು ಆಗಮಿಸುವರು.