ಇತ್ತೀಚೆಗೆ ನಿಧನರಾದ ಎಸ್. ರಾಮಚಂದ್ರ ಭಾರತೀಯ ಚಿತ್ರರಂಗದ ಪ್ರತಿಭಾವಂತ ಸಿನಿಮಾ ಛಾಯಾಗ್ರಾಹಕ. ಅವರ ಸ್ಮರಣಾರ್ಥ ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಚಿತ್ರಸಮೂಹ ಸಂಸ್ಥೆ ರಾಮಚಂದ್ರ ಛಾಯಾಗ್ರಹಣದ ಚಿತ್ರಗಳ ಪ್ರದರ್ಶನ ಮತ್ತು ವಿಚಾರ ಸಂಕಿರಣ ನಡೆಸುತ್ತಿದೆ.ಶನಿವಾರ ಸಂಜೆ 6.30ಕ್ಕೆ ‘ಔಟ್ಹೌಸ್’ ಚಿತ್ರ ಪ್ರದರ್ಶನ. ಭಾನುವಾರ ಬೆಳಿಗ್ಗೆ 10.30ಕ್ಕೆ ವಿಚಾರ ಸಂಕಿರಣದಲ್ಲಿ ನಿರ್ದೇಶಕ ಟಿ.ಎಸ್. ನಾಗಾಭರಣ, ಮಂಜುನಾಥ್, ಮಲ್ಲಿಕಾರ್ಜುನ (ಛಾಯಾಗ್ರಾಹಕರು), ಪತ್ರಕರ್ತ ಸದಾಶಿವ ಶೆಣೈ. ಮಧ್ಯಾಹ್ನ ‘ಬೇರು’ ಚಿತ್ರ ಪ್ರದರ್ಶನ.ಸ್ಥಳ: ಬಿಬಿಎಂಪಿ ಪ್ರಧಾನ ಕಚೇರಿ ಮುಂಭಾಗದ ಬಾದಾಮಿಹೌಸ್.