ತಮ್ಮ ಬೆಂಬಲಿಗರೊಂದಿಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ಮಾಡುತ್ತಿದ್ದಾಗ ನಡೆದ ಪೋಲಿಸ್ ದೌರ್ಜನ್ಯವನ್ನು ಖಂಡಿಸಿದ ಅವರು, ~ನನ್ನ ಬೆಂಬಲಿಗರು ಎದುರಿಸಿದ ತೊಂದರೆಗಳೂ ವ್ಯರ್ಥವಾಗುವುದಿಲ್ಲ~ ಎಂದರು. ~ಪ್ರಸಕ್ತ ಭ್ರಷ್ಟ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಕಾಣುವಿರಿ~ ಎಂದೂ ಅವರು ಭರವಸೆ ವ್ಯಕ್ತಪಡಿಸಿದರು.
ಶ್ರೀ ರವಿಶಂಕರ್ ಗುರೂಜಿ ಮತ್ತು ಇತರ ಗಣ್ಯರ ಮನವಿ ಮನ್ನಸಿ, ಭ್ರಷ್ಟಾಚಾರ ತಡೆಗೆ ಕಠಿಣವಾದ ಕಾನೂನು ಜಾರಿಗಾಗಿ ಒತ್ತಾಯಿಸಿ ತಾವು ಜೂನ್ 4ರಂದು ಆರಂಭಿಸಿದ ತಮ್ಮ 9 ದಿನಗಳ ಉಪವಾಸ ಸತ್ಯಾಗ್ರಹವನ್ನು ಬಾಬಾ ರಾಮದೇವ್ ಅವರು ಜೂನ್ 11ರಂದು ಕೊನೆಗೊಳಿಸಿದ್ದರು.