ಬೆಂಗಳೂರು: ಚಾಮರಾಜಪೇಟೆ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶ್ರೀ ರಾಮಸೇವಾ ಮಂಡಳಿ ಏರ್ಪಡಿಸಿರುವ 75ನೇ ರಾಮನವಮಿ ರಾಷ್ಟ್ರೀಯಸಂಗೀತ ಉತ್ಸವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು, ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಂಡಳಿಯ ಅಮೃತ ಮಹೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ಆಂಧ್ರಪ್ರದೇಶ ರಾಜ್ಯಪಾಲ ಇ.ಎಸ್. ಎಲ್.ನರಸಿಂಹನ್ ಅವರು `ರಾಮಪ್ರಿಯ' ಎಂಬ ಅಂತರ್ಜಾಲ ರೇಡಿಯೋಅನಾವರಣ ಮಾಡಿದರು. ಯು.ಶ್ರೀನಿವಾಸ್, ಯು. ರಾಜೇಶ್ ಮ್ಯಾಂಡೋಲಿನ್ ಕಛೇರಿ ಪ್ರಸ್ತುತಪಡಿಸಿದರು.
ಹೈದರಾಬಾದ್ನ ಶೇಷಾಚಾರಿ ಮತ್ತು ರಾಘವಾಚಾರಿ ಸಹೋದರರ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು. ಪಿಟೀಲಿನಲ್ಲಿ ಎಚ್.ಕೆ.ವೆಂಕಟರಾಮ, ಮೃದಂಗದಲ್ಲಿ ತ್ರಿವೇಂದ್ರಮ ಬಾಲಾಜಿ, ಕಂಜಿರಾದಲ್ಲಿ ಅಮೃತ್ ಸಹಕರಿಸಿದರು.