ನವದೆಹಲಿ (ಪಿಟಿಐ): ಎ.ಕೆ.ರಾಮಾನುಜ ಅವರ ವಿವಾದಾತ್ಮಕ ಪ್ರಬಂಧವೊಂದನ್ನು ಇತಿಹಾಸ ಪಠ್ಯದಿಂದ ತೆಗೆದುಹಾಕಲು ದೆಹಲಿ ವಿವಿ ಶೈಕ್ಷಣಿಕ ಮಂಡಳಿ ನಿರ್ಧರಿಸಿದೆ.
`ತ್ರಿ ಹಂಡ್ರೆಡ್ ರಾಮಾಯಣಾಸ್~ ಪ್ರಬಂಧವನ್ನು ದೆಹಲಿ ವಿವಿ ಇತಿಹಾಸ ಪಠ್ಯದಲ್ಲಿ ಸೇರಿಸಿತ್ತು. ಆದರೆ ಇದು ಬಲಪಂಥೀಯ ಹಿಂದೂಗಳ ಭಾವನೆಗಳನ್ನು ಕೆರಳಿಸುವ ಸಾಧ್ಯತೆ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿತ್ತು. ಸೋಮವಾರ ನಡೆದ ವಿವಿ ಶೈಕ್ಷಣಿಕ ಮಂಡಳಿಯಲ್ಲಿ ಈ ಬಗ್ಗೆ ಬಿಸಿಯೇರಿದ ಚರ್ಚೆ ನಡೆದಿದ್ದು, ನಂತರ ಪ್ರಬಂಧವನ್ನು ತೆಗೆದುಹಾಕಲು ತೀರ್ಮಾನ ಕೈಗೊಳ್ಳಲಾಯಿತು.
ಆದರೆ ಈ ನಿರ್ಧಾರವನ್ನು ವಿವಿಯ ಕೆಲವರು ದುರದೃಷ್ಟಕರ ಎಂದು ಬಣ್ಣಿಸಿದರೆ, ಇನ್ನು ಕೆಲವರು ಉತ್ತಮ ನಿಲುವು ಎಂದಿದ್ದಾರೆ.