ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾನುಜ ಪ್ರಬಂಧ ಕೈಬಿಡಲು ನಿರ್ಧಾರ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎ.ಕೆ.ರಾಮಾನುಜ ಅವರ ವಿವಾದಾತ್ಮಕ ಪ್ರಬಂಧವೊಂದನ್ನು ಇತಿಹಾಸ ಪಠ್ಯದಿಂದ ತೆಗೆದುಹಾಕಲು ದೆಹಲಿ ವಿವಿ ಶೈಕ್ಷಣಿಕ ಮಂಡಳಿ ನಿರ್ಧರಿಸಿದೆ.
 
`ತ್ರಿ ಹಂಡ್ರೆಡ್ ರಾಮಾಯಣಾಸ್~ ಪ್ರಬಂಧವನ್ನು ದೆಹಲಿ ವಿವಿ ಇತಿಹಾಸ ಪಠ್ಯದಲ್ಲಿ ಸೇರಿಸಿತ್ತು. ಆದರೆ ಇದು ಬಲಪಂಥೀಯ ಹಿಂದೂಗಳ ಭಾವನೆಗಳನ್ನು ಕೆರಳಿಸುವ ಸಾಧ್ಯತೆ ಎಂಬ ಅಭಿಪ್ರಾಯ ಹಲವರಿಂದ ವ್ಯಕ್ತವಾಗಿತ್ತು. ಸೋಮವಾರ ನಡೆದ ವಿವಿ ಶೈಕ್ಷಣಿಕ ಮಂಡಳಿಯಲ್ಲಿ ಈ ಬಗ್ಗೆ ಬಿಸಿಯೇರಿದ ಚರ್ಚೆ ನಡೆದಿದ್ದು, ನಂತರ ಪ್ರಬಂಧವನ್ನು ತೆಗೆದುಹಾಕಲು ತೀರ್ಮಾನ ಕೈಗೊಳ್ಳಲಾಯಿತು.

ಆದರೆ ಈ ನಿರ್ಧಾರವನ್ನು ವಿವಿಯ ಕೆಲವರು ದುರದೃಷ್ಟಕರ ಎಂದು ಬಣ್ಣಿಸಿದರೆ, ಇನ್ನು ಕೆಲವರು ಉತ್ತಮ ನಿಲುವು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT