ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ದೇವ್ ಹೋರಾಟ ಬೆಂಬಲಿಸಿ ಧರಣಿ

Last Updated 8 ಜೂನ್ 2011, 6:50 IST
ಅಕ್ಷರ ಗಾತ್ರ

ಭದ್ರಾವತಿ: ವಿದೇಶಿ ಬ್ಯಾಂಕ್‌ನಲ್ಲಿನ ಕಪ್ಪುಹಣ ವಾಪಸ್ ತರಿಸಬೇಕು  ಎಂದು ಆಗ್ರಹಿಸಿ ಹಾಗೂ ಈ ಹೋರಾಟದ ನಾಯಕರಾದ ಬಾಬಾ ರಾಮ್‌ದೇವ್ ಬಂಧನ ಖಂಡಿಸಿ ಮಂಗಳವಾರ ಧರಣಿ ಸತ್ಯಾಗ್ರಹ ನಡೆಯಿತು.

ಪತಂಜಲಿ ಯೋಗ ಪೀಠ ಹಾಗೂ ಭಾರತ್ ಸ್ವಾಭಿಮಾನ್ ಟ್ರಸ್ಟ್ ಕಾರ್ಯಕರ್ತರು ಇಲ್ಲಿನ ಮಾಧವಚಾರ್ ವೃತ್ತದಿಂದ ತಾ.ಪಂ ಕಚೇರಿ ತನಕ ಮೆರವಣಿಗೆ ನಡೆಸಿ ಸಾಂಕೇತಿಕ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ದೇಶದ ಭ್ರಷ್ಟ ವ್ಯವಸ್ಥೆ ಸರಿ ಮಾಡುವ ನಿಟ್ಟಿನಲ್ಲಿ ರಾಮ್‌ದೇವ್ ನಡೆಸಿರುವ ಹೋರಾಟ ಜನಪರ ಕಾಳಜಿ ಹೊಂದಿದೆ. ಆದರೆ ಅಧಿಕಾರಶಾಹಿ ಆಡಳಿತ ಅದರ ದಮನಕ್ಕೆ ಮುಂದಾಗಿರುವುದು ಖಂಡನೀಯ ಎಂದು ಕಿಡಿಕಾರಿದರು.

ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಅನ್ನಪೂರ್ಣಾ ಸತೀಶ್, ಹಾ.ರಾಮಪ್ಪ, ಪ್ರೇಮಾ, ಮೇಧಾವತಿ, ಜಯರಾಂ, ಕೊಡ್ಲುಯಜ್ಞಯ್ಯ, ಹಾ.ರಾಮಪ್ಪ, ಗೀತಾ, ಶೈಲೇಶ್‌ಕೋಠಿ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT