ಅಮೇಥಿ (ಪಿಟಿಐ): ಎದುರಾಳಿಗಳ ಚುನಾವಣಾ ಆಶ್ವಾಸನೆಯ ಪಟ್ಟಿಯನ್ನೊಳಗೊಂಡ ಕಾಗದವನ್ನು ಹರಿದು ಹಾಕಿದ ರಾಹುಲ್ ಗಾಂಧಿ ಅವರ ವರ್ತನೆಗೆ ಕಟು ಟೀಕೆಗಳು ವ್ಯಕ್ತವಾಗಿವೆ. ಲಖನೌದಲ್ಲಿ ಬುಧವಾರ ಚುನಾವಣಾ ಸಭೆಯಲ್ಲಿ ಈ ಘಟನೆ ನಡೆದಿತ್ತು.
`ರಾಹುಲ್ ಸಿಟ್ಟಿನಲ್ಲಿ ವೇದಿಕೆಯಿಂದ ಜಿಗಿದರೂ ಅಚ್ಚರಿಯಿಲ್ಲ~ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಲೇವಡಿ ಮಾಡಿದರೆ, `ರಾಹುಲ್ ತಮ್ಮ ಕೋಪವನ್ನು ನಿಗ್ರಹಿಸಿಕೊಳ್ಳಬೇಕು. ಸಿಟ್ಟು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ~ ಎಂದು ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹಿತವಚನ ನುಡಿದಿದ್ದಾರೆ.
`ಇದೊಂದು ತಮಾಷೆ. ಇದರಿಂದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳಲಾಗದು~ ಎಂದು ಬಿಜೆಪಿ ಟೀಕಿಸಿದೆ. ಈ ನಡುವೆ ಕಾಂಗ್ರೆಸ್, ರಾಹುಲ್ ಅವರನ್ನು ಸಮರ್ಥಿಸಿಕೊಂಡಿದೆ.
`ಚುನಾವಣೆ ಬಳಿಕ ಆಶ್ವಾಸನೆಗಳನ್ನು ಮರೆಯದೇ ಈಡೇರಿಸಬೇಕು~ ಎನ್ನುವ ಸಂದೇಶ ರಾಹುಲ್ ವರ್ತನೆಯ ಹಿಂದೆ ಅಡಗಿದೆ~ ಎಂದು ಪಕ್ಷವು ಬಣ್ಣಿಸಿದೆ.