ಆಂಧ್ರದ ಕರ್ನೂಲಿನಲ್ಲಿ ಮಾವಿನ ತೋಟಗಳ ಮೇಲೆ, ನಂದ್ಯಾಲದಲ್ಲಿ ಮನೆಗಳ ಮೇಲೆ ರೆಡ್ಡಿ ಭಾರಿ ಹೂಡಿಕೆ ಮಾಡಿರುವ ಬಗ್ಗೆ ತನಿಖಾ ಸಂಸ್ಥೆ ಈಗಾಗಲೇ ಮಾಹಿತಿ ಕಲೆ ಹಾಕಿದೆ. ರೆಡ್ಡಿ ಪತ್ನಿ ಅರುಣಾ ಕ್ರಯಪತ್ರ ನೋಂದಣಿ ಮಾಡಿಸಲು ನಂದ್ಯಾಲಕ್ಕೆ ಹೆಲಿಕಾಪ್ಟರ್ನಲ್ಲಿ ಆಗಮಿಸಿದ್ದ ಮಾಹಿತಿಯೂ ಇದರಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.