ನವದೆಹಲಿ, ಹೈದರಾಬಾದ್ (ಪಿಟಿಐ/ ಐಎಎನ್ಎಸ್): ಜನಾರ್ದನ ರೆಡ್ಡಿ ಬಂಧನವನ್ನು ಸ್ವಾಗತಿಸಿರುವ ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿಯೇ ಜನಾರ್ದನ ರೆಡ್ಡಿ ತಮ್ಮ `ಅಕ್ರಮ ಚಟುವಟಿಕೆ~ ಮುಂದುವರಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
`ಅಕ್ರಮ ಗಣಿಗಾರಿಕೆಗೆ ಸುಪ್ರೀಂಕೋರ್ಟ್ ಮತ್ತು ಕರ್ನಾಟಕ ಲೋಕಾಯುಕ್ತ ಅಸಮ್ಮತಿ ಸೂಚಿಸಿದ್ದರೂ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಗಣಿ ಮಾಫಿಯಾ ಕೋಟಿಗಟ್ಟಲೆ ಸಾರ್ವಜನಿಕ ಹಣವನ್ನು ಲೂಟಿ ಮಾಡಿದೆ~ಎಂದು ತಿಳಿಸಿದ್ದಾರೆ.