ಸಾವಯವ ಗೊಬ್ಬರದ ಜೊತೆಗೆ ಬೇವಿನಹಿಂಡಿ, ಟ್ರೈಕೋಡರ್ಮಾ ನೀಡಿ ಬಳ್ಳಿಯ ಆರೋಗ್ಯ ಕಾಪಾಡುತ್ತಾರೆ.ಟನ್ಗಟ್ಟಲೆ ಮೆಣಸು ಬೆಳೆಯುತ್ತಾರೆ' ಎಂದು ಕುಂಬಳಡಿಕೆಯ ಬೆಳೆಗಾರ ರಾಘವೇಂದ್ರ ಹೇಳುತ್ತಾರೆ.
`ಮೆಣಸಿಗೆ ಈಗ ಇರುವ ಧಾರಣೆ ಚೆನ್ನಾಗಿಯೇ ಇದೆ. ಆದರೆ ರೊಬಸ್ಟಾ ಕಾಫಿ ಚೆರ್ರಿಗೆ ಮಾತ್ರ ಚೀಲಕ್ಕೆ 3500 ರೂಪಾಯಿ ಬೆಲೆ ಸಿಗಬೇಕು'ಎಂದು ಮತ್ತೊಬ್ಬ ಬೆಳೆಗಾರ ಬಿಳಲ್ಗೋಡು ಧರ್ಮಸಾಮ್ರಾಜ್ಯ ಹೇಳುತ್ತಾರೆ.
ಈಗ ಮೆಣಸಿನ ಬಳ್ಳಿಗಳಲ್ಲಿ ಮೂಡಿರುವ ಹೂಗೆರೆಗಳು ಫಸಲಾಗಿ ಪರಿವರ್ತನೆ ಆಗುವ ಮುನ್ನ ಸೊರಗು ರೋಗ ಬಾಧಿಸದಿರಲಿ ಎಂದು ಬೆಳೆಗಾರರು ಹಾರೈಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಉತ್ತಮ ಫಸಲಿನ ನಿರೀಕ್ಷೆ ಇರುವುದರಿಂದ ಬೆಳೆಗಾರರು ಮೆಣಸಿನ ಬಳ್ಳಿಗಳಿಗೆ ಬೋರ್ಡೊ ಮಿಶ್ರಣ ಸಿಂಪಡಣೆ ಮಾಡುವ ಕೆಲಸವನ್ನೂ ಈ ಬಾರಿ ಮಾಡುತ್ತಿದ್ದಾರೆ.
ಮುಂದಿನ ವರ್ಷಗಳಲ್ಲಿ ಹೆಚ್ಚು ಮೆಣಸಿನ ಫಸಲು ಸಿಗುವಂತಾಗಲಿ ಎಂದು ಹೊಸದಾಗಿ ಬಳ್ಳಿಗಳನ್ನು ನೆಡುವ ಕೆಲಸವೂ ಚುರುಕಾಗಿ ಸಾಗಿದೆ.
- ರವಿ ಕೆಳಂಗಡಿ .