ಬೆಳಗಾವಿ: ಉಳ್ಳಾಗಡ್ಡಿ ಬೆಲೆ ಹಠಾತ್ ಕುಸಿತಗೊಂಡಿದ್ದರಿಂದ ಆಕ್ರೋಶಗೊಂಡ ರೈತರು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಎದುರು ರಸ್ತೆ ಮೇಲೆ ಕಲ್ಲುಗಳನ್ನಿಟ್ಟು ಬುಧವಾರ ರಸ್ತೆ ತಡೆ ನಡೆಸಿದರು. ಹುಬ್ಬಳ್ಳಿ ಎಪಿಎಂಸಿಯಲ್ಲಿ ಬೆಲೆ ಕುಸಿತದಿಂದ ಪ್ರತಿಭಟನೆ ನಡೆಯುತ್ತಿರುವ ಕಾರಣ, ಬುಧವಾರ ಬೆಳಗಾವಿ ಎಪಿಎಂಸಿಗೆ ಧಾರವಾಡ, ವಿಜಾಪುರ, ಗದಗ ಸೇರಿದಂತೆ ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ರೈತರು ಉಳ್ಳಾಗಡ್ಡಿ ತಂದಿದ್ದರು.