ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ವರವಾಗದ ಕೃಷ್ಣಾ ಕಾಲುವೆ

Last Updated 1 ಜುಲೈ 2013, 6:08 IST
ಅಕ್ಷರ ಗಾತ್ರ

ಚಡಚಣ: ಸತತ ಬರಗಾಲಕ್ಕೆ ಹೆಸರು ವಾಸಿಯಾದ ಇಂಡಿ ತಾಲ್ಲೂಕಿನಲ್ಲಿ ದಶಕ ಗಳ ಹಿಂದೆ ಕೃಷ್ಣಾ ಕಾಲುವೆ ನಿರ್ಮಾಣದ ಯೋಜನೆ ಆರಂಭಗೊಂಡಾಗ ರೈತರ ಮೊಗದಲ್ಲಿ ಆಶಾ ಭಾವನೆ ಮೂಡಿತು. ಆದರೆ ರೈತರ ಪಾಲಿಗೆ ವರವಾಗಬೇಕಾದ ಈ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ, ಜನಪ್ರತಿನಿಧಿಗಳ ಬೇಜವ್ದಾರಿಯಿಂದಾಗಿ ನೀರು ಹರಿಯದಿರುವುದು ದುರ ದೃಷ್ಟಕರ.

ಕೃಷ್ಣಾ ಆಣೆಕಟ್ಟಿನಿಂದ ನಾರಾಯಣ ಪುರ ಡ್ಯಾಂ ಮೂಲಕ ಇಂಡಿ ತಾಲ್ಲೂಕಿ ನಲ್ಲಿ ಸಾತಲಾಂವ ಸಾಲೋಟಗಿ, ಲಚ್ಯಾಣ, ಹಿರಸಂಗ ಚಿಕ್ಕಲೋಣಿ, ಹಲಸಂಗಿ, ಮಣಂಕಲಗಿ, ತದ್ದೇವಾಡಿ, ಹತ್ತಳ್ಳಿ ರೇವತಗಾಂವ ಮೂಲಕ ಭೀಮಾ ನದಿ ತೀರದಲ್ಲಿರುವ ದಸೂರ ಗ್ರಾಮಕ್ಕೆ ಬಂದು ತಲುಪುವ ಈ ಕಾಲುವೆಗಳಲ್ಲಿ ನೀರು ಹರಿಯುವುದೇ ದುಸ್ತರ.

ಕಳಪೆ ಕಾಮಗಾರಿಯಿಂದಾಗಿ ಎಲ್ಲೆಂದ ರಲ್ಲಿ ಉದುರಿಬೀಳುವ ಸಿಮೆಂಟ್, ಕಾಲುವೆಗಳಲ್ಲಿನ ಬಿರುಕುಗಳು, ತುಂಬಿ ನಿಂತ ಹೊಳು, ಕಿತ್ತು ಹೋದ ಗೇಟ್‌ಗಳು ಯೋಜನೆಯ ಅನುಷ್ಠಾನದಲ್ಲಾದ ವ್ಯಾಪಕ ಭ್ರಷ್ಟಾಚಾರವನ್ನು ಎತ್ತಿ ತೋರುತ್ತಿವೆ.

ಕಾಲುವೆಯಲ್ಲಿ ನೀರು ಸಮತಟ್ಟಾಗಿ ಹರಿಯುವ ಬದಲು, ಒಂದೇ ಬದಿಗೆ ಹರಿದು, ಹಳ್ಳಕೊಳ್ಳಗಳಲ್ಲಿ ನೀರು ಹರಿದು ಹೋಗಿ ಕಾಲುವೆಯ ಕೊನೆಯ ಗ್ರಾಮಗಳಿಗೆ ಮುಟ್ಟುವುದಿಲ್ಲ. ಕೃಷ್ಣಾ ಕಾಲುವೆಯಿಂದ  ಹಲಸಂಗಿಯವರೆಗೆ ಅಲ್ಪಸ್ವಲ್ಪ ನೀರು ಹರಿದು ಹಳ್ಳಕ್ಕೆ ಕೂಡುತ್ತಿದೆ.

ಈ ಗ್ರಾಮದಿಂದ ಮುಂದಿನ ಗ್ರಾಮಗಳಾದ ಏಳಗಿ, ಮಣಂಕಲಗಿ ಮೂಲಕ ದಸೂರವರೆಗೆ ನೀರು ಹರಿಯವುದೇ ಇಲ್ಲ.
ಪ್ರತಿ ವರ್ಷ ಲಕ್ಷಾಂತರ ಹಣ ವ್ಯಯಿಸಿ ಕಾಲುವೆ ಯಲ್ಲಿನ ಹೂಳು ತೆಗೆದರೂ ರೈತರ ಹೊಲಗಾಲುವೆಗಳಿಗೆ ನೀರು ಹರಿಯು ವುದು ಮಾತ್ರ ಮರೀಚಿಕೆಯಾಗಿದೆ.

ಕೋಟ್ಯಂತರ ಹಣ ವ್ಯಯಿಸಿ, ರೈತರ ಜಮೀನುಗಳಿಗೆ ನೀರು ಪೂರೈಸುವ ಸರ್ಕಾರದ ಯೋಜನೆ, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ್ಷ, ನಿರ್ವಹಣೆಯ ಕೊರತೆ ಯಿಂದಾಗಿ ಕೃಷ್ಣಾನದಿಯಿಂದ ನೀರು ಹರಿಸುವ ಈ ಯೋಜನೆ ರೈತರಿಗೆ ವರ ವಾಗದೆ ಮರೀಚಿಕೆಯಾಗಿ ಪರಿಣಮಿಸಿದೆ.

ಮುಂಗಾರು ಬಹುತೇಕ ಕೈಕೊಟ್ಟದೆ. ಮಳೆಯಿಲ್ಲದೆ ಬೇಸಿಗೆ ಸ್ಥಿತಿ ನಿರ್ಮಾಣ ವಾಗಿದೆ.
ಪರಿಸ್ಥಿತಿ ಇದೇ ರೀತಿ ಮುಂದು ವರಿದರೆ ಕುಡಿಯುವ ನೀರು ಸಿಗುವುದು ದುಸ್ತರವಾಗುವುದರಲ್ಲಿ ಸಂಶಯವಿಲ್ಲ. ಸರ್ಕಾರ ಕೂಡಲೇ ಈ ಕಾಲುವೆಗಳನ್ನು ದುರಸ್ತಿಗೊಳಿಸಿ, ಕಾಲುವೆಯ     ಮೂಲಕ ನೀರು ಹರಿಸಲು ಕ್ಷಮ ಕೈಗೊಳ್ಳದೇ ಇದ್ದರೆ ರೈತರ ಪರಸ್ಥತಿ ಜಿಂತಾಜನಕ ವಾಗುವುದರಲ್ಲಿ ಆಶ್ಚರ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT