ಸಿಮೆಂಟ್ ಉತ್ಪಾದನಾ ಕ್ಷೇತ್ರದಲ್ಲಿ ಹೆಸರಾದ `ಎಸಿಸಿ~ ಸಾಮಾಜಿಕ ಕಾಳಜಿಯ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇತ್ತೀಚೆಗೆ ಅದು ಯಶವಂತಪುರ ರೈಲು ನಿಲ್ದಾಣಕ್ಕೆ ಬ್ಯಾಟರಿ ಚಾಲಿತ ವಿದ್ಯುತ್ ವಾಹನವನ್ನು ದೇಣಿಗೆಯಾಗಿ ನೀಡಿತು.
ಪ್ಲಾಟ್ಫಾರಂ ತಲುಪಲು, ಬೋಗಿ ಏರಲು ಹಿರಿಯ ನಾಗರಿಕರು, ಗರ್ಭಿಣಿಯರು, ವಿಕಲಾಂಗರು ಅನುಭವಿಸುತ್ತಿದ್ದ ಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಇದೊಂದು ಪುಟ್ಟ ಹೆಜ್ಜೆ ಎನ್ನುತ್ತಿದೆ ಎಸಿಸಿ.ಇದರ ವಿಶೇಷವೆಂದರೆ ವೃದ್ಧರು, ಗರ್ಭಿಣಿಯರು ಮತ್ತು ಅಂಗವಿಕಲ ಪ್ರಯಾಣಿಕರನ್ನು ಮತ್ತು ಅವರ ಸಾಮಾನು ಸರಂಜಾಮುಗಳನ್ನು ನಿಲ್ದಾಣದ ಪ್ರವೇಶ ದ್ವಾರದಿಂದ ಪ್ಲಾಟ್ಾರಂ ವರೆಗೂ ಈ ವಾಹನದಲ್ಲಿ ಉಚಿತವಾಗಿ ಸಾಗಿಸಲಾಗುತ್ತದೆ.