ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಇಲಾಖೆಯ ನಿರ್ಲಕ್ಷ್ಯ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ಐತಿಹಾಸಿಕ ನಗರ ಶ್ರೀರಂಗಪಟ್ಟಣ ಪ್ರವಾಸಿಗರ ಮೆಚ್ಚಿನ ತಾಣವೂ ಆಗಿದೆ. ಮೈಸೂರಿಗೆ ಬರುವ ಪ್ರವಾಸಿಗರು ಶ್ರೀರಂಗಪಟ್ಟಣ ನೋಡದಿದ್ದರೆ ಮೈಸೂರು ಪ್ರವಾಸವೇ ಪೂರ್ಣವೆನಿಸುವುದಿಲ್ಲ. ಆದರೆ ಈ ಪ್ರೇಕ್ಷಣೀಯ ಸ್ಥಳ ರೈಲ್ವೆ ಇಲಾಖೆಗೆ ಮಾತ್ರ ಕಾಲಕಸವಾಗಿದೆ.

ಮೈಸೂರು ಬೆಂಗಳೂರಿನ ನಡುವೆ ಓಡಾಡುವ ಪ್ರಮುಖ ರೈಲುಗಳಾದ `ಟಿಪ್ಪು ಎಕ್ಸ್‌ಪ್ರೆಸ್', `ಕಾವೇರಿ ಎಕ್ಸ್‌ಪ್ರೆಸ್', `ಮೈಲಾಡಿತೊರೈ', `ರಾಜ್ಯರಾಣಿ' ಶ್ರೀರಂಗಪಟ್ಟಣದಲ್ಲಿ ನಿಲ್ಲುವುದಿಲ್ಲ.  ಇದರಲ್ಲಿ ಕೆಲವು ರೈಲುಗಳಿಗೆ ಮದ್ದೂರು,

ಚನ್ನಪಟ್ಟಣದಂತಹ ತಾಲ್ಲೂಕು ಕೇಂದ್ರಗಳಲ್ಲಿ ನಿಲುಗಡೆ ಇದೆ. ತಾಲ್ಲೂಕು ಕೇಂದ್ರವೂ, ಐತಿಹಾಸಿಕ ಪಟ್ಟಣವೂ ಆದ ಶ್ರೀರಂಗಪಟ್ಟಣದಲ್ಲಿ ಮಾತ್ರ ನಿಲುಗಡೆ ಇಲ್ಲದಿರುವುದು ವಿಪರ್ಯಾಸ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT