ರೈಲ್ವೆ ಮಾರ್ಗಗಳ ಬಗ್ಗೆ
ಸ್ಪಷ್ಟ ಸೂಚನೆ ಇಲ್ಲ
ನವದೆಹಲಿ, ಫೆ. 14- ಪಾರ್ಲಿಮೆಂಟಿನಲ್ಲಿ ಇಂದು ರೈಲ್ವೆ ಸಚಿವ ಶ್ರೀ ಜಗಜೀವನರಾಂರವರು 1961-62ನೇ ಸಾಲಿನ ರೈಲ್ವೆ ಆಯವ್ಯಯದ ಅಂದಾಜು ಪತ್ರ (ಬಜೆಟ್)ವನ್ನು ಮಂಡಿಸಿದರು. ಈ ಅಂದಾಜಿನ ಪ್ರಕಾರ ಈ ವರ್ಷ 8.64 ಕೋಟಿ ರೂಪಾಯಿಗಳಷ್ಟು ಆದಾಯ ಬರುವ ನಿರೀಕ್ಷೆ ಇದೆ.
ನಗರದಲ್ಲಿ ಬ್ರಿಟನ್ನಿನ ರಾಣಿ
ಅವರ ದರ್ಶನಾವಕಾಶ
ಬೆಂಗಳೂರು, ಫೆ. 14- ಇದೇ ತಿಂಗಳು 21 ರಿಂದ 23 ರವರೆಗೆ ರಾಜ್ಯಕ್ಕೆ ಭೇಟಿ ಕೊಡಲಿರುವ ಬ್ರಿಟನ್ನಿನ ರಾಣಿ ಮತ್ತು ಅವರ ಪತಿ ಡ್ಯೂಕ್ ಆಫ್ ಎಡಿನ್ಬರೋರವರ ಕಾರ್ಯಕ್ರಮದ ವಿವರವನ್ನು ಇಂದು ಸರ್ಕಾರ ಪ್ರಕಟಿಸಿ ಸಾರ್ವಜನಿಕರು ಅವರ ದರ್ಶನವನ್ನು ಪಡೆಯಬಹುದಾದ ಸ್ಥಳಗಳ ಬಗ್ಗೆ ಸೂಚನೆ ನೀಡಿದೆ.