ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ, ಬಾಂಗ್ಲಾ ಜತೆ ಕೃಷ್ಣ ಮಾತುಕತೆ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಥಿಂಫು (ಪಿಟಿಐ): ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಹತ್ಯೆ ನಡೆಸಿರುವುದರ  ಬಗ್ಗೆ ಭಾರತ ಮಂಗಳವಾರ ಇಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿತು.
33ನೇ ಸಾರ್ಕ್ ಸಚಿವರ ಮಂಡಳಿಯ ಸಭೆಗೆ ಆಗಮಿಸಿದ್ದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರು ಶ್ರೀಲಂಕಾ ವಿದೇಶ ಸಚಿವ ಜಿ.ಎಲ್. ಪೆರಿಸ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಕುರಿತು ಗಮನ ಸೆಳೆದಿದ್ದು ಉಭಯ ರಾಷ್ಟ್ರಗಳು ಇಂತಹ ಸೂಕ್ಷ್ಮ ಮತ್ತು ವ್ಯಾವಹಾರಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡು ಹಿಡಿಯುವತ್ತ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಸುಮಾರು 30 ನಿಮಿಷಗಳ ಕಾಲ ನಡೆದ ಈ ಮಾತುಕತೆಯಲ್ಲಿ ಇಬ್ಬರೂ ನಾಯಕರು ಮೀನುಗಾರರ ಸಮಸ್ಯೆಗಳನ್ನು ಚರ್ಚಿಸಲು ಆದಷ್ಟು ಬೇಗ ಜಂಟಿ ಕಾರ್ಯತಂಡದ ಸಭೆ ಕರೆಯಲು ಒಪ್ಪಿಗೆ ಸೂಚಿಸಿದರು. ಆದರೆ ತಮ್ಮ ತಮ್ಮ ಕಾವಲು ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳದಿರಲು ಅವರು ಒಪ್ಪಿದರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣು ಪ್ರಕಾಶ್ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಒಪ್ಪಂದ ಜಾರಿಗೆ ಚಾಲನೆ: ಇದೇ ಸಂದರ್ಭದಲ್ಲಿ ಬಾಂಗ್ಲಾದೇಶದ ವಿದೇಶ ಸಚಿವ ದೀಪು ಮೋನಿ ಅವರನ್ನೂ ಭೇಟಿ ಮಾಡಿದ ಕೃಷ್ಣ, ಈ ವರ್ಷಾಂತ್ಯದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಢಾಕಾ ಭೇಟಿಗೂ ಪೂರ್ವಭಾವಿಯಾಗಿ, ಕಳೆದ ವರ್ಷ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿಯಲ್ಲಿ ಕೈಗೊಂಡ ಸಂಪರ್ಕ ಮತ್ತು ನೀರು ಹಂಚಿಕೆ ಸೇರಿ ವಿವಿಧ  ಕ್ಷೇತ್ರಗಳ ಒಪ್ಪಂದ ಜಾರಿಗೆ ಚಾಲನೆ ನೀಡಿದರು.  ಆಗ ಭಾರತವು ಸುಮಾರು ಒಂದು ಶತಕೋಟಿ ಡಾಲರ್‌ಗಳ ನೆರವನ್ನು ಬಾಂಗ್ಲಾಕ್ಕೆ ವಿಸ್ತರಿಸುವುದಾಗಿ ಪ್ರಕಟಿಸಿತ್ತು. ಸಂಪರ್ಕ, ಜಲ ಹಂಚಿಕೆ, ಗಡಿ ವಿವಾದ, ಆವೃತ ವಲಯ ಮತ್ತಿತರ ಸಮಸ್ಯೆಗಳಿಗೆ ಸಂಬಂಧಿಸಿ ಎರಡೂ ದೇಶಗಳು ಪ್ರಗತಿದಾಯಕ ಚರ್ಚೆ ನಡೆಸಿದ್ದವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT