ಲಂಕಾದಲ್ಲಿ ರಾಷ್ಟ್ರೀಯ ಸಾಮರಸ್ಯ ಮತ್ತು ರಾಜಕೀಯ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯತೆಗಳ ಬಗ್ಗೆ ಕೃಷ್ಣ ಅಲ್ಲಿನ ನಾಯಕರಿಗೆ ಮನವರಿಕೆ ಮಾಡಿಕೊಡುವ ನಿರೀಕ್ಷೆಯಿದೆ.
ಸಚಿವರು ತಮಿಳು ರಾಷ್ಟ್ರೀಯ ಮೈತ್ರಿಕೂಟ (ಟಿಎನ್ಎ)ದ ಪ್ರತಿನಿಧಿಗಳನ್ನು ಸಹ ಭೇಟಿಯಾಗಿ, ತಮಿಳು ಪ್ರಾಬಲ್ಯವಿರುವ ಪ್ರಾಂತ್ಯಗಳಲ್ಲಿ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಲಂಕಾ ನಾಯಕರೊಡನೆ ನಡೆಸುವ ಮಾತುಕತೆಯ ಬಗ್ಗೆ ಪ್ರತಿಕ್ರಿಯೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ತಮಿಳು ಪ್ರಾಂತ್ಯಗಳಲ್ಲಿ ಭೂ ಮತ್ತು ಪೊಲೀಸ್ ಅಧಿಕಾರಗಳನ್ನು ತಮಗೆ ವರ್ಗಾಯಿಸುವಂತೆ ಟಿಎನ್ಎ ಕೇಳುತ್ತಿದೆ. ಆದರೆ ಇದಕ್ಕೆ ನಿರಾಕರಿಸಿರುವ ರಾಜಪಕ್ಸೆ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಆಹ್ವಾನ ನೀಡಿದ್ದಾರೆ.
ಯುದ್ಧದಿಂದ ನಿರ್ಗತಿಕರಾಗಿರುವ ನಾಗರಿಕರಿಗೆ ಪುನರ್ವಸತಿ ಕಲ್ಪಿಸಲು ಭಾರತ ಸರ್ಕಾರದ ನೆರವಿನೊಂದಿಗೆ ನಿರ್ಮಾಣವಾಗುತ್ತಿರುವ ಸುಮಾರು 50 ಸಾವಿರ ಮನೆಗಳ ಪ್ರಗತಿಯನ್ನು ಕೂಡಾ ಕೃಷ್ಣ ಪರಿಶೀಲಿಸಲಿದ್ದಾರೆ.
ಭಾರತದ ರಿಯಾಯಿತಿ ಸಹಾಯಧನದಲ್ಲಿ ಪುನರ್ನಿರ್ಮಾಣಗೊಳ್ಳುತ್ತಿರುವ ಗಾಲೆಯ ದಕ್ಷಿಣ ರೈಲ್ವೆ ಯೋಜನೆಯನ್ನು ಸಹ ಸಚಿವರು ಉದ್ಘಾಟಿಸಲಿದ್ದಾರೆ.