ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂರಗುಂದ ಗ್ರಾಮದ ಪ್ಲಾಟ್ನಿಂದ ಶಿಬಾರದ ವರೆಗೆ ರಸ್ತೆ ಎಡಬದಿಯಲ್ಲಿ ಕಾಲುವೆ ಮತ್ತು ಸಿಡಿ ನಿರ್ಮಾಣ ಮಾಡಲಾಗಿತ್ತು. ಆ ಕಾಮಗಾರಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ 2.85 ಲಕ್ಷ ರೂ.ಗಳ ಕೂಲಿ ನೀಡಬೇಕಿತ್ತು. ಕಳೆದ ಆರು ತಿಂಗಳಿಂದ ಜಿ.ಪಂ. ಎಂಜಿನಿಯರ್ ವಿಭಾಗದ ಕಚೇರಿಗೆ ಅಲೆದರೂ ಬಿಲ್ ತಯಾರಿಸಿರಲಿಲ್ಲ. 22 ಸಾವಿರ ರೂ. ಹಣ ನೀಡಿದರೆ ಮಾತ್ರ ಬಿಲ್ ತಯಾರಿಸುವುದಾಗಿ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಅವರು ಫಲಾನುಭವಿಗಳ ಮುಖಂಡ ಶಿವಪ್ಪ ಅವರಿಗೆ ಹೇಳಿದ್ದರು. ಈ ವಿಷಯ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ ಶಿವಪ್ಪ ಲೋಕಾಯುಕ್ತರು ರಾಸಾಯನಿಕ ಲೇಪನ ಮಾಡಿದ 22 ಸಾವಿರ ರೂ. ಹಣವನ್ನು ಎಂಜಿನಿಯರ್ ಪಾಟೀಲರಿಗೆ ನೀಡುತ್ತಿದ್ದಾಗಪೊಲೀಸರು ದಾಳಿ ನಡೆಸಿದರು.