ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣತೀರ್ಥಕ್ಕೆ ತ್ಯಾಜ್ಯ ನೀರು: ಆಕ್ರೋಶ

Last Updated 19 ಸೆಪ್ಟೆಂಬರ್ 2013, 8:41 IST
ಅಕ್ಷರ ಗಾತ್ರ

ಹುಣಸೂರು: ಪಟ್ಟಣದ ತ್ಯಾಜ್ಯ ನೀರು ಲಕ್ಷ್ಮಣತೀರ್ಥ ನದಿ ಸೇರುತ್ತಿದ್ದು, ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮಧ್ಯ ಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿಗೆ ಒಳಚರಂಡಿ ನೀರು ಸೇರುತ್ತಿದ್ದು,, ಈ ಬಗ್ಗೆ ಪುರಸಭೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪುರಸಭೆ ಮಾಜಿ ಅಧ್ಯಕ್ಷ ಚಂದ್ರನಾಯಕ ಅರೋಪಿಸಿದ್ದಾರೆ.

ನದಿ ನೀರು ಕಲುಷಿತಗೊಳ್ಳದಂತೆ ಅನೇಕ ಯೋಜನೆಗಳು ಪಟ್ಟಣಕ್ಕೆ ಹರಿದು ಬಂದಿದ್ದರೂ ಪುರಸಭೆ ಸೂಕ್ತ ರೀತಿಯಲ್ಲಿ ಕಾಮಗಾರಿ ನಿರ್ವಹಿಸದೇ ಇರುವುದರಿಂದ ಒಳಚರಂಡಿ ನೀರು ಸಂಗ್ರಹ ಕೇಂದ್ರ ಶಿಥಿಲಗೊಂಡಿದೆ. ಈ ಬಗೆ್ಗ ಹಲವು ಬಾರಿ ಅಧಿಕಾರಿಗಳ ಗಮನಕೆ್ಕ ತಂದಿದ್ದರೂ ದುರಸ್ತಿ ಮಾಡಿಲ್ಲ.

ಕಾರಣ ನದಿಗೆ ಕೊಳಚೆ ನೀರು ಸೇರುತ್ತಿದೆ ಎಂದರು. ಸಂಪೂರ್ಣ ಒಳಚರಂಡಿ ಯೋಜನೆ ಜಾರಿಗೊಳಿಸಲು ಕಳೆದ 5 ವರ್ಷದಿಂದ ಯಾವುದೇ ಕ್ರಮ ತೆಗೆದುಕೊಳ್ಳದೇ ಕಾಲ ವ್ಯಯ ಮಾಡಿರುವುದು ವಿಷಾದನೀಯ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT