ವಿಜಯಪುರ: ಇಲ್ಲಿನ ಗುರಪ್ಪನಮಠದ ನೀಲಗಿರೀಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ವರಮಹಾಲಕ್ಷ್ಮಿ ಶಕ್ತಿ ಪೀಠದ ವತಿಯಿಂದ ಲೋಕಲ್ಯಾಣಾರ್ಥವಾಗಿ ವರಮಹಾಲಕ್ಷ್ಮಿ ದೇವಿಯವರಿಗೆ ಸಾರ್ವತ್ರಿಕ ಲಕ್ಷಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪೂಜಾಕಾರ್ಯಗಳ ಅಂಗವಾಗಿ ಮಹಾಗಣಪತಿ ಪ್ರಾರ್ಥನೆ, ಪುಣ್ಯಾಹವಾಚನ, ಕಳಶ ಸ್ಥಾಪನೆ, ಪಂಚಗವ್ಯಮೇಳ, ಹೋಮಾದಿಕಾರ್ಯಗಳು ನಡೆಸಲಾಯಿತು. ಲಕ್ಷಕುಂಕುಮಾರ್ಚನೆ, ತೀರ್ಥಪ್ರಸಾದ ವಿನಿಯೋಗ, ಮಡಿಲುತುಂಬುವ ಪೂಜೆ ನಡೆಯಿತು. ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎಂ.ನಾರಾಯಣಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.