ಪುಣೆ ಮಹಾನಗರ ಪಾಲಿಕೆಯು ಭೀಮಸೇನ ಜೋಷಿ ನಿಧನರಾದ ತಕ್ಷಣ ಇಂತಹದ್ದೊಂದು ಪ್ರಶಸ್ತಿ ನೀಡಲಾಗುವುದೆಂದು ಪ್ರಕಟಿಸಿತ್ತು. ಈ ಪ್ರಶಸ್ತಿಯ ಜತೆಗೆ ಒಂದು ಲಕ್ಷದ ಹನ್ನೊಂದು ಸಾವಿರ ರೂಪಾಯಿಗಳ ನಗದನ್ನೂ ನೀಡಲಾಯಿತು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪುಣೆ ಮೇಯರ್ ಮೋಹನ್ ಸಿಂಗ್ ರಾಜಪಾಲ್, ರಾಜ್ಯ ಆರಣ್ಯ ಸಚಿವ ಪಟನ್ಗೋರ್ ಕದಂ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.