ಕಲಘಟಗಿ: ಹಾಲಿ ಶಾಸಕ ಸಂತೋಷ್ ಲಾಡ್ ಅವರಿಗೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಇಲ್ಲಿನ ಯುವ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ತಳ್ಳಿಹಾಳ, ಪಕ್ಷವು ಸಂತೋಷ ಲಾಡ ಅವರಿಗೆ ಟಿಕೆಟ್ ನೀಡಲು ವಿಳಂಬ ಧೋರಣೆ ಅನುಸರಿಸಿದಲ್ಲಿ, ಯುವ ಘಟಕದ ಪದಾಧಿಕಾರಿಗಳೆಲ್ಲರೂ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರು. ಕಳೆದ ಬಾರಿ ಜಿಲ್ಲೆಯಲ್ಲಿ ಪಕ್ಷದ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದ ಲಾಡ್ ಅವರಿಗೆ ಟಿಕೆಟ್ ನೀಡದಿರುವುದು ಖಂಡನೀಯ ಎಂದರು. ರಾಜೀನಾಮೆ ನಿರ್ಧಾರವನ್ನು ಸಂತೋಷ ಲಾಡ್ ಕ್ಷೇತ್ರಕ್ಕೆ ಆಗಮಿಸಿದ ನಂತರ ಅವರೊಂದಿಗೆ ಚರ್ಚಿಸಿ ಪ್ರಕಟಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಶ್ರೀನಿವಾಸ ಕಂಪ್ಲಿ, ಪ್ರಧಾನಕಾರ್ಯದರ್ಶಿ ನಾಗರಾಜ ಬಂಡಿ, ಮಂಜುನಾಥ ಉಳ್ಳಾಗಡ್ಡಿ, ದಸ್ತಗೀರ ಹುಣಶಿಕಟ್ಟಿ, ವಿನಾಯಕ ಕುರುಬರ, ಶಿವಾನಂದ ಕಳಸಗೌಡ್ರ, ಅಜಿತ ಬೆಳಗಾಂವಕರ, ಗುರು ಕಂಪ್ಲಿ, ಬಾಬು ಅಂಚಟಗೇರಿ, ಶಂಕರ ಹಿರೇಮಠ, ಚನ್ನಬಸಪ್ಪ ಹವಳಕೊಂಡ, ಬಸವರಾಜ ಲಮಾಣಿ, ಬಾನು ಲಮಾಣಿ, ಅಶೋಕ ಶೆಟ್ಟಿ, ಸೋಮು ಹಡಪದ, ಎಸ್.ಎಸ್.ಕುರುಬರ ಹಾಜರಿದ್ದರು.