ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ–ಬೈಕ್ ಅಪಘಾತ: ರಾಜಸ್ತಾನದ ವ್ಯಕ್ತಿ ಸಾವು

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೊಸಕೋಟೆ:  ಇಲ್ಲಿನ ರಾಂಪುರ ರಸ್ತೆಯ ಬಿದರಹಳ್ಳಿ ಕ್ರಾಸ್‌ ಬಳಿ ಮಂಗಳವಾರ ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ರಾಜಸ್ತಾನ ಮೂಲದ ನರಸಿ­ನಾಯ್‌(27) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟೈಲ್‌್ಸ ಹಾಕುವ ಕೆಲಸ ಮಾಡು­ತ್ತಿದ್ದ ನರಸಿನಾಯ್‌, ಸ್ನೇಹಿತನ ಜೊತೆ ಆವಲಹಳ್ಳಿ ಕಡೆ ಬರುವಾಗ ಎದರು­ಗಡೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಕೆಳಗೆ ಬಿದ್ದ ನರಸಿನಾಯ್‌ ಮೇಲೆ ಲಾರಿ ಚಕ್ರ ಹರಿದು ಅವರು ಸ್ಥಳದಲ್ಲೇ ಸಾವನ್ನ­ಪ್ಪಿದರು. ಅವರ ಸ್ನೇಹಿತ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾ­ದರು.

ಪ್ರತಿಭಟನೆ: ಘಟನೆಯಿಂದ ಆಕ್ರೋಶಗೊಂಡ  ಗ್ರಾಮಸ್ಥರು ರಸ್ತೆ ಉಬ್ಬು ನಿಮಿರ್ಸುವಂತೆ ಒತ್ತಾಯಿಸಿ ಜೆಸಿಬಿ ಯಂತ್ರ ತಂದು ರಸ್ತೆ ಅಗೆದು ಪ್ರತಿಭಟನೆ ನಡೆಸಿದರು. ಬಿದರಹಳ್ಳಿ ಕ್ರಾಸ್‌ ಬಳಿ ವಾಹನ ದಟ್ಟಣೆ ಹೆಚ್ಚಿರುವುದರಿಂದ ಅಪಘಾತಗಳು ಸಾಮಾನ್ಯವಾಗಿವೆ.

ಕ್ರಾಸ್‌ ಬಳಿಯೇ ಶಾಲೆ ಸಹ ಇರುವುದರಿಂದ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಉಬ್ಬು ನಿರ್ಮಿಸಬೇಕೆಂದು ಮನವಿ ಮಾಡಿ­ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT