ನಂತರ ಚಾಲಕ ಮಂಜುನಾಥ್, ಲಾಲ್ಬಾಗ್ ಆವರಣದಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ರಸ್ತೆ ಮಧ್ಯದ ಬ್ಯಾರಿಕೇಡ್ಗಳಿಗೆ ವಾಹನ ಗುದ್ದಿಸಿದ್ದಾನೆ. ಅಲ್ಲದೇ, ಪಾದಚಾರಿ ಮಾರ್ಗದಲ್ಲಿನ ಹೂ ಕುಂಡಗಳ ಮೇಲೆ ವಾಹನ ಹತ್ತಿಸಿ ದಾಂಧಲೆ ನಡೆಸಿದ್ದಾನೆ. ಈ ವೇಳೆ ಲಾಲ್ಬಾಗ್ನಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ ಅವರೆಲ್ಲರನ್ನೂ ಬಂಧಿಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಬಂಧ ಲಾಲ್ಬಾಗ್ನ ಭದ್ರತಾ ವಿಭಾಗದ ಮೇಲ್ವಿಚಾರಕ ಮುನಿರಾಜು ಅವರು ದೂರು ಕೊಟ್ಟಿದ್ದಾರೆ. ಅತಿಕ್ರಮ ಪ್ರವೇಶ (ಐಪಿಸಿ-447), ಬೆದರಿಕೆ (ಐಪಿಸಿ-506) ಹಾಗೂ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದ (ಐಪಿಸಿ-427) ಆರೋಪದ ಮೇಲೆ ಬಂಧಿತರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೇ, ಮಂಜುನಾಥ್ ವಿರುದ್ಧ ಪಾನಮತ್ತ ಚಾಲನೆ ಆರೋಪದಡಿ ವಿಲ್ಸನ್ಗಾರ್ಡನ್ ಸಂಚಾರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆರೋಪಿಗಳಾದ ಮಂಜುನಾಥ್, ಪ್ರೇಮ್ಕುಮಾರ್ ಮತ್ತು ಶಶಿಧರ್ ಲಾಲ್ಬಾಗ್ ಆವರಣದಲ್ಲಿ ತಂಪು ಪಾನೀಯ ಮಾರಾಟ ಮಳಿಗೆ ಇಟ್ಟುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.