ಬೆಂಗಳೂರು: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಡೆಸುತ್ತಿರುವ `ಯುವ ಕರ್ನಾಟಕ' ಮಾಸಪತ್ರಿಕೆಗೆ ಬರಹಗಾರರಿಂದ ಲೇಖನ, ಕಥೆ, ಕವನ, ಹನಿಗವನ, ಚುಟುಕು, ವಿಮರ್ಶೆ, ಸಂದರ್ಶನ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಬರಹಗಳನ್ನು ಆಹ್ವಾನಿಸಲಾಗಿದೆ.
ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಸಂಚಿಕೆ ಹೊರತರಲಿದ್ದು ಇದಕ್ಕೂ ಕೂಡ ಲೇಖನಗಳನ್ನು ಆಹ್ವಾನಿಸಿದೆ.