ಟ್ರಾನ್ಸಲೇಶನ್ ಆಸ್ ಕನ್ವರ್ಸೇಶನ್ ವಿಷಯದ ಬಗ್ಗೆ ಗಿರಿರಾಜ್ ಕಿರದೂ, ಲಕ್ಷ್ಮಿ ಹೊಲ್ಮ್ಸ್ಟ್ರೋಂ, ರಾಹುಲ್ ಸೋನಿ, ಆರ್ಶಿಯ ಸತ್ತಾರ್, ವನಮಾಲಾ ಅವರಿಂದ ಗೋಷ್ಠಿ. ಶನಿವಾರ ಬೆಳಿಗ್ಗೆ 10. ವಾಚನ: ಜಯಂತ ಕಾಯ್ಕಿಣಿ, ಆರತಿ ಎಚ್.ಎನ್.(ಕನ್ನಡ), ಫ್ರಾನ್ಸಿಸ್ಕಾ ಮರ್ಸಿಯಾನೊ, ದೌನಾ ಲೂರ್ (ಇಂಗ್ಲಿಷ್, ಫ್ರೆಂಚ್). `ಟ್ರೈವಲ್ ಡಿಸಾಸ್ಟರ್ಸ್- ಭಾಗ 1~ ನಾಟಕ ಪ್ರದರ್ಶನ 11.30.
ಅಂಜುಮ್ ಹಸನ್, ರಾಹುಲ್ಸೋನಿ, ವಿವೇಕ ಶಾನಭಾಗ ಅವರಿಂದ `ಬರವಣಿಗೆ ಕುರಿತ ಬರಹಗಳು~ ವಿಷಯದ ಬಗ್ಗೆ ಗೋಷ್ಠಿ. ವಾಚನ: ಕೆ.ವಿ.ಕೆ. ಮೂರ್ತಿ, ಉಷಾ ರಾಜಗೋಪಾಲ್, ಕೆ.ಆರ್.ಉಷಾ (ಇಂಗ್ಲಿಷ್), ಅರುಂಧತಿ ಘೋಷ್, ಅಭಿಷೇಕ್ ಮಹುಮ್ದಾರ್ (ಬಾಂಗ್ಲಾ, ಹಿಂದಿ). ವಸುಧೇಂದ್ರ, ನಾಗರಾಜ ವಸ್ತಾರೆ. `ಟ್ರೈವಲ್ ಡಿಸಾಸ್ಟರ್ಸ್- ಭಾಗ 2~ ನಾಟಕ ಪ್ರದರ್ಶನ.
ಮಧ್ಯಾಹ್ನ 2.15ಕ್ಕೆ `ಕಲ್ಚರ್ ಎಲಿಫೆಂಟ್~ ವಿಷಯದ ಕುರಿತು ಚರ್ಚೆ. ಓದು: ಜೋಶುವಾ ಮುಯಿವಾ, ದೀಪಿಕಾ ಅರವಿಂದ್ (ಇಂಗ್ಲಿಷ್), ಕ್ರಿಸ್ತೋಫರ್ ಕ್ಲಿಒಬ್ಲ್, ಅಣ್ಣಾ ಬ್ರೊ (ಜರ್ಮನ್, ಡೇನಿಷ್). ಅಂಜುಮ್ ಹಸನ್, ಇಂದಿರಾ ಚಂದ್ರಶೇಖರ್ (ಇಂಗ್ಲಿಷ್). 3.45ಕ್ಕೆ ಸ್ಮೃತಿನಂದನ್ನಲ್ಲಿ ಪುಸ್ತಕದ ಮಳಿಗೆ ಉದ್ಘಾಟನೆ. `ಟ್ರೈವಲ್ ಡಿಸಾಸ್ಟರ್ಸ್ ಭಾಗ- 3~ ನಾಟಕ ಪ್ರದರ್ಶನ. ಓದು: ಎಚ್.ಎಲ್.ಪುಷ್ಪ, ಮೌನೇಶ್ ಬಡಿಗೇರ್ (ಕನ್ನಡ).
`ಕನ್ನಡದಲ್ಲಿ ಹೊಸ ಬರವಣಿಗೆಗಳು~ ವಿಷಯದ ಬಗ್ಗೆ ಗೋಷ್ಠಿ. ಪಾಲ್ಗೊಳ್ಳುವವರು: ವಿವೇಕ್ ಶಾನಭಾಗ, ಜಯಂತ ಕಾಯ್ಕಿಣಿ, ರಘುನಾಥ ಚ.ಹ, ಆಶಾದೇವಿ, ಕೆ.ಸತ್ಯನಾರಾಯಣ. ಓದು: ಸಂಹಿತಾ ಆರ್ನಿ , ಜಾಹ್ನವಿ ಬರುವಾ (ಇಂಗ್ಲಿಷ್), ಸಾನಿಯಾ, ಅಶುತೋಷ್ ಪೊತ್ದಾರ್, ಮಿಲಿಂದ್ ಬೋಕಿಲ್ (ಮರಾಠಿ). ಸಂಜೆ 6ಕ್ಕೆ ಕ್ಲಾಸ್ ಆಂಕೆರ್ಸೆನ್ ಅವರಿಂದ ನೃತ್ಯ ರೂಪಕ.
ಸ್ಥಳ: ಎನ್ಜಿಎಂಎ ಹಾಗೂ ಸ್ಮೃತಿ ನಂದನ್, ಅರಮನೆ ಮೈದಾನ ರಸ್ತೆ.