ಬಾಗೇಪಲ್ಲಿ: ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿ ಕಾರಿ ಎಂ.ಆರ್.ಕೃಷ್ಣಪ್ಪ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಟ್ಟಣದ ಹೊರವಲಯದ ಕ್ರೈಸ್ತ ಶಾಲೆಗೆ 6 ಮತ್ತು 7ನೇ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ನೀಡಲು ಆಡಳಿತ ಮಂಡಳಿಯಿಂದ ತಮ್ಮ ಕಚೇರಿಯಲ್ಲಿ ರೂ. 20 ಸಾವಿರ ಲಂಚ ಪಡಯುತ್ತಿದ್ದ ಸಂದರ್ಭ ಲೋಕಾಯುಕ್ತ ಡಿವೈಎಸ್ಪಿ ಬೂದಿಹಾಳ್ ತಂಡ ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿ ಅವರನ್ನು ಬಂಧಿಸಿದೆ. ಪಿಎಸ್ಐ ಕೃಷ್ಣೇನಾಯಕ್ ದಾಳಿಯಲ್ಲಿ ಭಾಗವಹಿಸಿದ್ದರು.