ಬೆಂಗಳೂರು: `ಸಾಹಿತ್ಯದ ಮೂಲಕ ಸಾಧಿಸಲಾಗದಿರುವುದನ್ನು ಸಂಗೀತದಿಂದ ಸಾಧಿಸಬಹುದು. ಕೇಳುಗರನ್ನು ಬೇರೆ ಲೋಕಕ್ಕೆ ಕರೆದೊಯ್ಯುವ ಶಕ್ತಿ ಸಂಗೀತಕ್ಕಿದೆ~ ಎಂದು ಹಿರಿಯ ಕವಿ ಸಾ.ಶಿ.ಮರುಳಯ್ಯ ಅವರು ಹೇಳಿದರು.
ವಚನ ಜ್ಯೋತಿ ಬಳಗವು ಇತ್ತಿಚೆಗೆ ನಗರದಲ್ಲಿ ಆಯೋಜಿಸಿದ್ದ `ವಚನ ಮುಂಗಾರು~ ಸಂಗೀತ ವರ್ಷಧಾರೆ ಮತ್ತು ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಸಂಗೀತಕ್ಕೆ ವಿಶೇಷವಾದ ಶಕ್ತಿಯಿದೆ. ಯಾವುದೇ ನೋವು ಮರೆಸಿ ಅದಕ್ಕೆ ಔಷಧಿಯಾಗುವ ವಿಶೇಷತೆಯಿದೆ ಎಂದರು.
`ವಚನ ಜ್ಯೋತಿ ಬಳಗವು ವಚನ ಮುಂಗಾರು ಹೆಸರಿನಲ್ಲಿ ವರ್ಷಧಾರೆ ನಡೆಸಿರುವುದು ಸಂಸ್ಕೃತಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ನಾಡಿನ ಸಂಸ್ಕೃತಿಯನ್ನು ಉಳಿಸುವಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು~ ಎಂದು ಹೇಳಿದರು.