ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಮುಂಗಾರು ನಾದಧಾರೆ

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಾಹಿತ್ಯದ ಮೂಲಕ ಸಾಧಿಸಲಾಗದಿರುವುದನ್ನು ಸಂಗೀತದಿಂದ ಸಾಧಿಸಬಹುದು. ಕೇಳುಗರನ್ನು ಬೇರೆ ಲೋಕಕ್ಕೆ ಕರೆದೊಯ್ಯುವ ಶಕ್ತಿ ಸಂಗೀತಕ್ಕಿದೆ~ ಎಂದು ಹಿರಿಯ ಕವಿ ಸಾ.ಶಿ.ಮರುಳಯ್ಯ ಅವರು ಹೇಳಿದರು.
ವಚನ ಜ್ಯೋತಿ ಬಳಗವು ಇತ್ತಿಚೆಗೆ ನಗರದಲ್ಲಿ ಆಯೋಜಿಸಿದ್ದ `ವಚನ ಮುಂಗಾರು~ ಸಂಗೀತ ವರ್ಷಧಾರೆ ಮತ್ತು ಅಭಿನಂದನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಸಂಗೀತಕ್ಕೆ ವಿಶೇಷವಾದ ಶಕ್ತಿಯಿದೆ. ಯಾವುದೇ ನೋವು ಮರೆಸಿ ಅದಕ್ಕೆ ಔಷಧಿಯಾಗುವ ವಿಶೇಷತೆಯಿದೆ ಎಂದರು.

`ವಚನ ಜ್ಯೋತಿ ಬಳಗವು ವಚನ ಮುಂಗಾರು ಹೆಸರಿನಲ್ಲಿ ವರ್ಷಧಾರೆ ನಡೆಸಿರುವುದು ಸಂಸ್ಕೃತಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ. ನಾಡಿನ ಸಂಸ್ಕೃತಿಯನ್ನು ಉಳಿಸುವಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕು~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT