ಬೆಂಗಳೂರು: ಕರ್ನಾಟಕ ರಾಜ್ಯ ದಲಿತ ಹಿಂದುಳಿದ ಹಿತರಕ್ಷಣಾ ಮತ್ತು ಕಲ್ಯಾಣ ಸಂಘವು ಇದೇ 30 ರಂದು ಛಲವಾದಿ ಮತ್ತು ಮಾದಿಗ ಜನಾಂಗದ ಸಮುದಾಯದ ವಧು ವರರ ಹಾಗೂ ಪೋಷಕರ ರಾಜ್ಯ ಮಟ್ಟದ ಉಚಿತ ಸಮಾವೇಶವನ್ನು ಹಮ್ಮಿಕೊಂಡಿದೆ.
ಸಮಗಾರ, ಮಾದಿಗ, ಮೋಚಿ, ಆದಿಚಂದ್ರ, ಆದಿಕರ್ನಾಟಕ, ಆದಿಜಾಂಬವ ಸಮುದಾಯ ವಧು ವರರು ಹಾಗೂ ಪೋಷಕರು ಸಮಾವೇಶದಲ್ಲಿ ಭಾಗವಹಿಸಬಹುದು. ಸಮಾವೇಶವು ಮೆಜೆಸ್ಟಿಕ್ನಲ್ಲಿರುವ ಅಲಂಕಾರ್ ಪ್ಲಾಜಾದ ಭಾರತ್ ಸರ್ವಿಸಸ್ ಸಭಾಂಗಣದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6.30 ರವರೆಗೆ ನಡೆಯಲಿದೆ.
ವಿಳಾಸ: ಕರ್ನಾಟಕ ರಾಜ್ಯ ದಲಿತ ಹಿಂದುಳಿದ ಹಿತರಕ್ಷಣಾ ಮತ್ತು ಕಲ್ಯಾಣ ಸಂಘ, ನಂ 422, 2ನೇ ಮಹಡಿ, ಆರಾಧನಾ ಕೇಂದ್ರ, ಅಲಂಕಾರ್ ಪ್ಲಾಜಾ, ಕೆ.ಜಿ.ರಸ್ತೆ. ಮೊಬೈಲ್: 98808 32046.