ಶುಕ್ರವಾರ ಬೆಳಿಗ್ಗೆ ಅವರು ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುವ ಸಂಭವ ಇದೆ.
ರಾತ್ರಿ 10.50ಕ್ಕೆ ಬೆಂಗಳೂರಿಗೆ ಬಂದ ಗಡ್ಕರಿ ಅವರನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ, ಸಚಿವರಾದ ಜಗದೀಶ ಶೆಟ್ಟರ್, ಆರ್. ಅಶೋಕ, ಎಸ್.ಎ. ರಾಮದಾಸ್, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ ಬರಮಾಡಿಕೊಂಡರು. ನಂತರ ಗಡ್ಕರಿ ಅವರು ನೇರವಾಗಿ ಲಲಿತ್ ಅಶೋಕ ಹೋಟೆಲ್ಗೆ ತೆರಳಿದರು.