ಕೆಲವು ಪಕ್ಷಿಗಳಿಗೆ ರತ್ನಗಂಬಳಿಯ ಸ್ವಾಗತ ಸಿಕ್ಕರೆ ಇನ್ನು ಕೆಲವಕ್ಕೆ ತ್ರಿಶಂಕು ಸ್ಥಿತಿ. ಅಧಿಕಾರಕ್ಕಾಗಿ ಹಪಾಹಪಿಸಿ ಬಂದಿರುವ ಈ ಹಕ್ಕಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ನಮ್ಮ ಪ್ರಜ್ಞಾವಂತಿಕೆಯನ್ನು ಅಭಿವ್ಯಕ್ತಿಸುವ ಸುವರ್ಣಾವಕಾಶ ನಮಗೆ ಲಭಿಸಲಿದೆ. ಆಸೆ ಆಮಿಷಕ್ಕೆ ಬಲಿಯಾಗದೆ, ತನ್ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಇನ್ನಷ್ಟು ಆಳಕ್ಕೆ ಇಳಿಯುವಂತೆ ಮಾಡುವ ಗುರುತರ ಹೊಣೆ ನಮ್ಮದು.