ಚೌಧರಿ ಅವರನ್ನು ಗುರುವಾರ ಭೇಟಿ ಮಾಡಿದ ಗುಪ್ತಾ ತಮ್ಮ ಅಭಿಪ್ರಾಯವನ್ನು ನೇರ, ನಿಷ್ಠುರವಾಗಿ ತಿಳಿಸಿದ್ದಾರೆ. ಆದೇಶ ಹೊರಡಿಸಿದ ನಂತರ ಇದೇ ಮೊದಲ ಬಾರಿಗೆ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿ ಮಾಡಲು ಆಗಮಿಸಿದ ಅಶೋಕ ಖೇಮ್ಕಾ ಹಾಗೂ ಗುಪ್ತಾ ನಡುವೆ ವಾಗ್ವಾದ ನಡೆದಿದೆ.
ಮುಖ್ಯ ಕಾರ್ಯದರ್ಶಿ ಜತೆಗೆ ಸುಮಾರು 50 ನಿಮಿಷಗಳ ಕಾಲ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಖೇಮ್ಕಾ, ಮಾತುಕತೆಯ ವಿವರಗಳನ್ನು ಬಹಿರಂಗಗೊಳಿಸಲು ನಿರಾಕರಿಸಿದರು.
ಈ ನಡುವೆ ಖೇಮ್ಕಾ ಅವರು ಹೊರಡಿಸಿದ ಆದೇಶದ ಮೂಲ ಪ್ರತಿ ಮಾಧ್ಯಮಗಳಿಗೆ ತಲುಪಿದ್ದರೂ ತಮ್ಮ ಇಲಾಖೆಗಿನ್ನೂ ತಲುಪಿಲ್ಲ ಎಂದು ಟಿ.ಸಿ. ಗುಪ್ತಾ ತಿಳಿಸಿದ್ದಾರೆ.