ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆ ಸಂಸ್ಥಾಪನಾ ದಿನಾಚರಣೆ

Last Updated 8 ಅಕ್ಟೋಬರ್ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ವಾಯುಪಡೆಯ 79ನೇ ಸಂಸ್ಥಾಪನಾ ದಿನವನ್ನು ನಗರದ `ಕಮಾಂಡ್ ಆಸ್ಪತ್ರೆ~ಯಲ್ಲಿ ಶನಿವಾರ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಾಯುಪಡೆಯ ಅಧಿಕಾರಿಗಳು ಮತ್ತು ಯೋಧರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು, `ದೇಶದ ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳೊಂದೇ ಆಸ್ತಿಯಲ್ಲ. ನಿಮ್ಮಂಥ ನಿಷ್ಠಾವಂತರೂ ಅಮೂಲ್ಯ ಆಸ್ತಿ~ ಎಂದು ಹೇಳಿದರು. ಭಾರತೀಯ ವಾಯುಪಡೆ ಪ್ರಪಂಚದ ಅತಿದೊಡ್ಡ ವಾಯುಪಡೆಗಳಲ್ಲಿ ಒಂದು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಭಾಷಣಕ್ಕೂ ಮೊದಲು ರಾಜ್ಯಪಾಲರು ವಾಯುಪಡೆಯ ಯೋಧರಿಂದ ಗೌರವ ರಕ್ಷೆ ಸ್ವೀಕರಿಸಿದರು. ನಂತರ ಅವರು `ಕಮಾಂಡ್ ಆಸ್ಪತ್ರೆ~ಯ ಕ್ಯಾನ್ಸರ್ ಮತ್ತು ಅಪಘಾತ ಚಿಕಿತ್ಸೆ ವಿಭಾಗಗಳಿಗೆ ಭೇಟಿ ನೀಡಿದರು.
ಭಾರದ್ವಾಜ್ ಅವರ ಪತ್ನಿ ಪ್ರಫುಲ್ಲತಾ ಭಾರದ್ವಾಜ್, ವಾಯುಪಡೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT