ನವದೆಹಲಿ (ಐಎಎನ್ಎಸ್): ವಾರಾಣಸಿ ಲೋಕಸಭೆ ಕ್ಷೇತ್ರದ ಚುನಾವಣಾ ಫಲಿತಾಂಶ ತಡೆ ಹಿಡಿಯಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.
ನರೇಂದ್ರ ಮೋದಿ ಈ ಕ್ಷೇತ್ರದ ನಿವಾಸಿಯಲ್ಲ. ಅಲ್ಲದೇ ಅವರು ಇನ್ನೊಂದು ಕ್ಷೇತ್ರದಿಂದಲೂ ಸ್ಪರ್ಧಿಸಿದ್ದಾರೆ. ಹೀಗಾಗಿ ವಾರಾಣಸಿ ಫಲಿತಾಂಶ ತಡೆಹಿಡಿಯಬೇಕೆಂದು ಕೋರಿ ವಕೀಲರಾದ ಲಿಲ್ಲಿ ಥಾಮಸ್ ಅರ್ಜಿ ಸಲ್ಲಿಸಿದ್ದರು.