ಬೆಂಗಳೂರು: ಮೂರು ಸೆಟ್ಗಳಲ್ಲಿ ಪ್ರಾಬಲ್ಯ ಮೆರೆದ ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಬಿಎಸ್ಎನ್ಎಲ್ ಅಖಿಲ ಭಾರತ 11ನೇ ವಾಲಿಬಾಲ್ ಟೂರ್ನಿಯಲ್ಲಿ ಎರಡನೇ ಗೆಲುವು ಪಡೆದರು.
ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ `ಎ~ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ 25-16, 25-8, 25-16ಪಾಯಿಂಟ್ಗಳಿಂದ ಕೇರಳ ತಂಡವನ್ನು ಮಣಿಸಿತು.
ಮೊದಲ ಹಾಗೂ ಮೂರನೇ ಸೆಟ್ನಲ್ಲಿ ಆತಿಥೇಯ ತಂಡ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಯಿತು. ಆದರೆ, ಎರಡನೇ ಸೆಟ್ನಲ್ಲಿ ಆತಿಥೇಯರಿಗೆ ಹೆಚ್ಚು ಪೈಪೋಟಿ ಎದುರಾಗಲಿಲ್ಲ.