ಕಟ್ಟೆ ಶ್ರೀನಿವಾಸ ಹಾಗೂ ಕೃಷ್ಣವೇಣಿ ಅಮ್ಮ ದಂಪತಿ ಪುತ್ರರಾಗಿ ಉಡುಪಿಯಲ್ಲಿ 1939ರಲ್ಲಿ ವೇದವ್ಯಾಸ ಶ್ರೀನಿವಾಸ (ವಿ.ಎಸ್.) ಆಚಾರ್ಯ ಜನನ.
ಉಡುಪಿ ಹಾಗೂ ಕರಾವಳಿ ಭಾಗದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಳೆದ 4 ದಶಕಗಳಿಂದ ಸಕ್ರಿಯವಾಗಿರುವ ಡಾ. ಆಚಾರ್ಯ, ವೃತ್ತಿಯಲ್ಲಿ ವೈದ್ಯ- ಪ್ರವೃತ್ತಿಯಲ್ಲಿ ರಾಜಕಾರಣಿ.
ಡಾ. ವಿ.ಎಸ್.ಆಚಾರ್ಯ ಎಂದೇ ಚಿರಪರಿಚಿತ. ಜನರಿಂದ ನೇರ ಆಯ್ಕೆಯಾಗಿ ಹೆಚ್ಚು ರಾಜಕೀಯ ನಡೆಸದಿದ್ದರೂ, ವಿಧಾನ ಪರಿಷತ್ ಸದಸ್ಯರಾಗಿ ಅನುಭವಿ ಎನಿಸಿಕೊಂಡವರು. ಉಡುಪಿ ಪುರಸಭೆ ಸದಸ್ಯ, ಅಧ್ಯಕ್ಷರಾಗಿ ರಾಜಕೀಯ ಆರಂಭಿಸಿದ ಈ ವೈದ್ಯ ನಾಲ್ಕು ದಶಕಗಳ ಸುದೀರ್ಘ ಅನುಭವ, ಪಕ್ಷ ನಿಷ್ಠೆ ಅವರನ್ನು ಬಿಜೆಪಿ ಸರ್ಕಾರದಲ್ಲಿ ವಿವಿಧ ಸಚಿವ ಪದವಿಗಳನ್ನು ದೊರಕಿಸಿಕೊಟ್ಟಿತ್ತು.
* ಪೂರ್ಣ ಹೆಸರು: ವೇದವ್ಯಾಸ ಶ್ರೀನಿವಾಸ ಆಚಾರ್ಯ
* ಜನನ: 6 ಜುಲೈ 1939, ಉಡುಪಿ
* ತಂದೆ: ಕಟ್ಟೆ ಶ್ರೀನಿವಾಸ ಆಚಾರ್ಯ, ತಾಯಿ ಕೃಷ್ಣವೇಣಿ ಅಮ್ಮ
* ವಿದ್ಯಾರ್ಹತೆ: ಬಿಎಸ್ಸಿ, ಎಂಬಿಬಿಎಸ್.
* ಪತ್ನಿ: ಶಾಂತಾ ವಿ.ಆಚಾರ್ಯ
* ಮಕ್ಕಳು: ನಾಲ್ವರು ಪುತ್ರರು-ಡಾ. ರವಿರಾಜ ಆಚಾರ್ಯ, ಡಾ. ಕಿರಣ್ ವಿ. ಆಚಾರ್ಯ (ಕೆಎಂಸಿಯಲ್ಲಿ
ವೈದ್ಯರು.), ಗಣೇಶ್ ಪ್ರಸಾದ್, ರಾಜೇಶ್ ಪ್ರಸಾದ್ (ಎಂಜಿನಿಯರ್, ಅಮೆರಿಕ)ಪುತ್ರಿ-ಭಾರತಿ ಹೆಬ್ಬಾರ್ (ಪತಿ ಮೋಹನ್ ಹೆಬ್ಬಾರ್, ಅಮೆರಿಕ)
* 1959ರಲ್ಲಿ ಮಣಿಪಾಲ ಕೆಎಂಸಿ ವೈದ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ.
* 1968ರಲ್ಲಿ ಉಡುಪಿ ಪುರಸಭೆ ಅಧ್ಯಕ್ಷ. ಆಗ ಅವರಿಗೆ 28 ವರ್ಷ.
* 1974 -77ರವರೆಗೆ ಭಾರತೀಯ ಜನಸಂಘ ಜಿಲ್ಲಾ ಅಧ್ಯಕ್ಷ
* 1975-77 ತುರ್ತು ಪರಿಸ್ಥಿತಿ-19 ತಿಂಗಳ ಸೆರೆವಾಸ.
* 1977-83 ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ
* 1983- ಉಡುಪಿ ವಿಧಾನಸಭಾಕ್ಷೇತ್ರದಿಂದ ಆಯ್ಕೆ.
* 1984 - ಬಿಜೆಪಿ ರಾಜ್ಯ ಉಪಾಧ್ಯಕ್ಷ. ಮುಂದಿನ 20 ವರ್ಷಗಳವರೆಗೆ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೇಮಕ.
* 1996-ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ.
* 2002-ಉಡುಪಿ ಜಿಲ್ಲೆ ರಚನೆ. ವಿಧಾನಪರಿಷತ್ ಸದಸ್ಯರಾಗಿ ಮರು ಆಯ್ಕೆ.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸದನ ಸಮಿತಿ ಅಧ್ಯಕ್ಷ.
* 2006-ವೈದ್ಯಕೀಯ ಶಿಕ್ಷಣ ಸಚಿವ.
* 2008-ಗೃಹ ಸಚಿವ.
* 2010-ಹೆಚ್ಚುವರಿಯಾಗಿ ಮುಜರಾಯಿ ಇಲಾಖೆ
* 2010(ಸೆ)-ಉನ್ನತ ಶಿಕ್ಷಣ ಸಚಿವ.
* 2010(ಡಿ)-ಹೆಚ್ಚುವರಿಯಾಗಿ ಮಾಹಿತಿ ತಂತ್ರಜ್ಞಾನ/ಜೈವಿಕ ತಂತ್ರಜ್ಞಾನ.
* 2012-ಫೆ. 14 ,ನಿಧನ (ಬೆಂಗಳೂರು)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.