`ರೈತರಿಗೆ ಭೂಮಿ ವಾಪಸು ನೀಡದಿದ್ದರೆ ರಾಜ್ಯದ ತುಂಬಾ ಹೋರಾಟ ರೂಪಿಸಲಾಗುವುದು' ಎಂದು ಭಾರತೀಯ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮದಾಸ್ ಅಠವಳೆ ಘೋಷಿಸಿದರು. ಟಿ.ಜೆ. ಅಬ್ರಹಾಂ, ಲಿಯೊ ಸಲ್ಡಾನಾ, ಫಟಾಫಟ್ ನಾಗರಾಜ್, ಆರ್.ಮೋಹನರಾಜ್, ಜಿ. ನಾಗರಾಜ್ ಮತ್ತಿತರ ಮುಖಂಡರು ಮಾತನಾಡಿದರು. ಮೇಧಾ ಆಗಾಗ `ಬೇಕೇ ಬೇಕು ನ್ಯಾಯ ಬೇಕು' ಎನ್ನುವ ಘೋಷಣೆ ಹಾಕುವ ಮೂಲಕ ಹೋರಾಟಗಾರರಲ್ಲಿ ಹುರುಪು ತುಂಬುತ್ತಿದ್ದರು.