ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಡಿ.ಸುರೇಶ್, ಯಾವುದೇ ವ್ಯಕ್ತಿ ತನ್ನ ಆರ್ಥಿಕ ಪರಿಸ್ಥಿತಿ, ತಿಳಿವಳಿಕೆ ಕೊರತೆ ಮತ್ತು ಒತ್ತಡದಿಂದ ಎಸಗಬಹುದಾದ ಅಪರಾಧ ತಡೆಗಟ್ಟಲು ಕಾನೂನು ಅರಿವು ಮೂಡಿಸುವ ಸಲುವಾಗಿ ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಈ ಕಾರ್ಯಾಗಾರಗಳನ್ನು ನಡೆಸುತ್ತಿದೆ. ಜನಸಾಮಾನ್ಯರು ಇದರ ಸದುಪಯೋಗ ಪಡೆಯುವಂತೆ ತಿಳಿಸಿದರು.