ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶೆ ಕಮಲಾವತಿ ಅವರು ವಿಜಯಕಾಂತ್ ಅವರಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರು. ಆದರೆ, ವಿಜಯಕಾಂತ್ ಅವರು ನ್ಯಾಯಾಲಯಕ್ಕೆ ಹಾಜರಾಗುವಲ್ಲಿ ವಿಫಲರಾಗಿದ್ದರು.
ವಿಜಯಕಾಂತ್ ಅವರಿಗೆ ಬುಧವಾರ ಜಾಮೀನು ರಹಿತ ವಾರೆಂಟ್ನ್ನು ಜಾರಿಗೊಳಿಸಲಾಗಿತ್ತು.ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಲಾಗಿದೆ.