ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರದಲ್ಲಿ ಧಾರಾಕಾರ ಸುರಿದ ಚಿತ್ತಿ ಮಳೆ

Last Updated 22 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ವಿಜಾಪುರ: ನಗರದಲ್ಲಿ ಭಾನುವಾರ ಕೆಲಕಾಲ ಧಾರಾಕಾರವಾಗಿ ಸುರಿದ ಚಿತ್ತಿ ಮಳೆಯಿಂದ ತಗ್ಗು ಗುಂಡಿಗಳಿಂದ ತುಂಬಿದ ಇಲ್ಲಿನ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದವು.

ಇದರಿಂದ ಕೆಲಸ ಕಾರ್ಯಗಳಿಗಾಗಿ ತೆರಳಿದ ವಾಹನಗಳ ಸವಾರರು ತೀವ್ರ ತೊಂದರೆ ಅನುಭವಿಸಿದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.

ಮಧ್ಯಾಹ್ನ 3 ಗಂಟೆಗೆ ಸುಮಾರು ಅರ್ಧ ತಾಸು ಸುರಿದ ಬಿರುಗಾಳಿ ಮಿಶ್ರಿತ ಈ ಮಳೆಯ ಮಧ್ಯದಲ್ಲೂ ಹಲವು ಪಾದಚಾರಿಗಳು ತಮ್ಮ ಕೆಲಸ ಕಾರ್ಯಗಳಿಗೆ ರಸ್ತೆಯಲ್ಲಿ ಸಂಚರಿಸಿದರೆ, ವಾಹನಗಳ ಸವಾರರು ರಸ್ತೆ ಯಾವುದು, ತಗ್ಗು ಗುಂಡಿ ಯಾವುದು, ಎಂಬುದು ತಿಳಿಯದೇ ಮುಂದೆ ಸಾಗಲು ಹರಸಾಹಸ ಪಟ್ಟರು. ಬೀದಿ ಬದಿಯ ವ್ಯಾಪಾರಿಗಳು ಮಳೆಯ ತೊಂದರೆಯನ್ನು ಅನುಭವಿಸಿದರು.

ಇನ್ನು 2 ದಿನದಲ್ಲಿ ಈ ಚಿತ್ತಿ ಮಳೆಯ ಅವಧಿ ಮುಗಿಯಲಿದ್ದು, 23ರಿಂದ ಸ್ವಾತಿ ಮಳೆಯು ಭರವಸೆಯ ಮಳೆಯಾಗಿ ಸುರಿದರೆ ಹಿಂಗಾರಿ ಬೆಳೆಗಳಾದ ಜೋಳ, ಗೋಧಿ, ಕಡಲೆ ಇನ್ನಿತರ ಬೆಳೆಗಳಿಗೆ ಮತ್ತಷ್ಟು ಅನುಕೂಲವಾಗುತ್ತದೆ ಎಂದು ಜಿಲ್ಲೆಯ ರೈತರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT