ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಕಡಲೇಕಾಯಿ ಪರಿಷೆ

Last Updated 17 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನೆಲಮಂಗಲ: ಪಟ್ಟಣಕ್ಕೆ ಸಮೀಪದ ಸೊಂಡೆಕೊಪ್ಪ ರಸ್ತೆಯ ಪುರಾತನ ಬಯಲು ಉದ್ಭವ ವಿನಾಯಕ ಸ್ವಾಮಿ ಬ್ರಹ್ಮ ರಥೋತ್ಸವ (ಕಡಲೇಕಾಯಿ ಪರಿಷೆ) ಸಾವಿರಾರು ಭಕ್ತರ ಸಮ್ಮುಖ­ದಲ್ಲಿ ಮಂಗಳವಾರ ವಿಜೃಂಭಣೆ­ಯಿಂದ ನಡೆಯಿತು.

ಮಧ್ಯಾಹ್ನ 12.30ರಿಂದ 1.30ರ ಅಭಿಜಿನ್‌ ಲಗ್ನದಲ್ಲಿ ನಡೆದ ರಥೋ­ತ್ಸವ­ದಲ್ಲಿ ವಿನಾಯಕನಿಗೆ ಭಕ್ತರು ಸೂರು ಬಾಳೆಹಣ್ಣು ಮತ್ತು ಕಡಲೆ­ಕಾಯಿ ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಜನಪದ ಕಲಾ ತಂಡಗಳು ಕಲಾ ಪ್ರದರ್ಶನ ನೀಡಿದವು. ತಾಲ್ಲೂಕಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದ ಪರಿಷೆಗೆ ಪೂರ್ವ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ­ಗಳನ್ನು ಹಮ್ಮಿಕೊಳ್ಳಲಾಗಿತ್ತು.

ಮಾಗಡಿ, ರಾಮನಗರ ಭಾಗಗ­ಳಿಂದ ಸಾವಿರಾರು ಭಕ್ತರು ಬಂದಿದ್ದರು. ಬೆಳಗ್ಗಿನಿಂದ ರಾತ್ರಿವರೆಗೂ ಸೊಂಡೆ­ಕೊಪ್ಪ ರಸ್ತೆಯಲ್ಲಿ ಭಕ್ತರ ಪ್ರವಾಹ ನೆರೆದಿತ್ತು. ತಾಲ್ಲೂಕಿನ ಸುತ್ತಮುತ್ತಲ ಹಳ್ಳಿಗಳ ಗ್ರಾಮಸ್ಥರು ಅರವಟಿಕೆಗಳನ್ನು ಹಾಕಿಕೊಂಡು ಪಾನಕ, ಮಜ್ಜಿಗೆ, ಕೋಸಂಬರಿಗಳನ್ನು ವಿತರಿಸಿದರು. ದೇವಸ್ಥಾನ ಸಮಿತಿ­ಯಿಂದ ಅನ್ನ­ಸಂತರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT