ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದರ್ಭ: ನಾಳೆ ಜಂತರ್ ಮಂತರ್‌ನಲ್ಲಿ ಧರಣಿ

Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಪ್ರತ್ಯೇಕ ವಿದರ್ಭ ರಾಜ್ಯ ರಚನೆಗೆ ಒತ್ತಾಯಿಸುತ್ತಿರುವ ವಿದರ್ಭ ಜಂಟಿ ಕ್ರಿಯಾ ಸಮಿತಿ, ಹೊಸ ರಾಜ್ಯ ಬೇಡಿಕೆ ಒಕ್ಕೂಟ ಇಲ್ಲಿನ ಸಂಸತ್ ಭವನ ಬಳಿಯ ಜಂತರ್ ಮಂತರ್ ಮುಂದೆ ಆ. 5ರಂದು ಧರಣಿ ನಡೆಸಲು ನಿರ್ಧರಿಸಿವೆ.

`ಹೊಸ ರಾಜ್ಯ ರಚನೆ ನಿರ್ಧಾರ ಕೈಗೊಂಡಾಗ ವಿದರ್ಭ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಕೇಂದ್ರ ಈ ಹಿಂದೆ ಭರವಸೆ ನೀಡಿತ್ತು. ಈ ಹಿಂದುಳಿದ ಭಾಗಕ್ಕೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಮಾಜಿ ಶಾಸಕ ವಾಮನರಾವ್ ಚಟಪ್ ಹೇಳಿದ್ದಾರೆ.

ವಿರೋಧವಿಲ್ಲ: `ಅಂಖಡ ಮಹಾರಾಷ್ಟ್ರವೇ ಇರಲಿ ಎಂಬುದು ನನ್ನ ಬಯಕೆ. ಆದರೆ, ವಿದರ್ಭ ಬೇಡಿಕೆಯನ್ನು ನಾನು ವಿರೋಧಿಸುವುದಿಲ್ಲ' ಎಂದು ಕೃಷಿ ಸಚಿವ ಶರದ್ ಪವಾರ್ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT