ಈ ಸಂಪತ್ತು ಮರಳಿ ತರುವಂತೆ ಕೋರ್ಟ್ ಸರ್ಕಾರದ ಮೇಲೆ ಒತ್ತಡ ಹೇರಿದರೆ ಕಳೆದುಹೋಗುತ್ತಿರುವ ನಂಬಿಕೆ ಪುನಃ ಸಂಪಾದಿಸಲು ಸಾಧ್ಯ ಎಂದು ಅವರು ಬ್ಲಾಗ್ನಲ್ಲಿ ಬರೆದಿದ್ದಾರೆ. ಕೋರ್ಟ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿರುವ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನ್ಯಾಯಾಂಗದ ಕಾರ್ಯಶೀಲತೆಯನ್ನು ಶ್ಲಾಘಿಸಿದ್ದಾರೆ. ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಧೈರ್ಯ ಪ್ರದರ್ಶಿಸಿದ ಏಕೈಕ ಸಂಸ್ಥೆ ಎಂದು ಅವರು ನ್ಯಾಯಾಂಗವನ್ನು ಪ್ರಶಂಶಿಸಿದ್ದಾರೆ.