ನವದೆಹಲಿ (ಪಿಟಿಐ): ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ವೈ.ಎಸ್. ಜಗನ್ಮೋಹನ್ ರೆಡ್ಡಿ ಒಡೆತನದ ಉದ್ಯಮಗಳಿಗೆ ವಿದೇಶಿ ಹಣ ಸಂದಾಯವಾಗುತ್ತಿರುವ ಆರೋಪದ ಕುರಿತು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಸ್ಥಳೀಯ ಸಿಬಿಐ ವಿಶೇಷ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.
ರೆಡ್ಡಿ ಪರ ವಕೀಲರ ಸಮ್ಮುಖದಲ್ಲಿ ವಿಚಾರಣೆಯನ್ನು ಶನಿವಾರದಿಂದಲೇ ಕೈಗೆತ್ತಿಕೊಳ್ಳಲಾಗುತ್ತಿದ್ದು, ಈ ತಿಂಗಳ 21ರತನಕ ನಡೆಯಲಿದೆ ಎಂದು ನಿರ್ದೇಶನಾಲಯದ ವಕೀಲ ಸುಬ್ಬಾ ರಾವ್ ತಿಳಿಸಿದರು.
ಇದಕ್ಕೂ ಮೊದಲು ಕೋರ್ಟ್, ರೆಡ್ಡಿ ಹಾಗೂ ನಿರ್ದೇಶನಾಲಯದ ವಾದವನ್ನು ಆಲಿಸಿದ್ದು, ಈ ಸಂಬಂಧ ಆದೇಶವನ್ನು ಶುಕ್ರವಾರದವರೆಗೆ ಕಾದಿರಿಸಿತ್ತು.