ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಕೈ ಕತ್ತರಿಸಿ ತಂದೆ ಮೇಲೆ ಹಲ್ಲೆ

Last Updated 13 ಡಿಸೆಂಬರ್ 2013, 8:59 IST
ಅಕ್ಷರ ಗಾತ್ರ

ಗೌರಿಬಿದನೂರು: ಕ್ಷುಲ್ಲಕ ಕಾರಣಕ್ಕೆ ಒಂಬತ್ತನೇ ತರಗತಿ ವಿದ್ಯಾರ್ಥಿ ಕೈ ಕತ್ತರಿಸಿ, ಆತನ ತಂದೆಗೆ ಚೂರಿಯಿಂದ ಇರಿದಿ­ರುವ ಘಟನೆ ತಾಲ್ಲೂಕಿನ ಡಿ.ಪಾಳ್ಯ­ದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಇದೇ ಗ್ರಾಮದ ಹರೀಶ್‌, ಬಾಲಕೃಷ್ಣ, ಮಂಜು ಎನ್ನುವವರು ಕುಡಿದು ಮನೆ ಬಳಿ ಜಗಳವಾಡುವಾಗ ಮಚ್ಚಿನಿಂದ ವಿದ್ಯಾರ್ಥಿ ಅನಿಲ್‌ ಕುಮಾರ್‌ ಕೈ ಕತ್ತರಿಸಿ, ಆತನ ತಂದೆ ನಾರಾಯಣಪ್ಪ ಅವರ ಬೆನ್ನಿಗೆ ಚೂರಿ ಹಾಕಿ ಪರಾರಿಯಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಅನಿಲ್‌­ಕುಮಾರ್‌ನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರಾಯಣಪ್ಪ ಗ್ರಾಮದಲ್ಲಿ ಕುರಿ ವ್ಯಾಪಾರ ನಡೆಸುತ್ತಿದ್ದರು ಎನ್ನಲಾಗಿದೆ.

ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT